<p><strong>ಹಿರಿಯೂರು:</strong> ‘ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಭಾರತೀಯರನ್ನು ಒಗ್ಗೂಡಿಸುವ ವಿಚಾರದಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸಿತ್ತು. ದೇಸೀ ಸೊಗಡಿನ ಪ್ರತೀಕವಾಗಿರುವ ರಂಗಕಲೆ ನಶಿಸಲು ಬಿಡಬಾರದು’ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ತಿಳಿಸಿದರು.</p>.<p>ನಗರದ ವೇದಾವತಿ ಬಡಾವಣೆಯಲ್ಲಿ ಬುಧವಾರ ರಾತ್ರಿ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕೃಷ್ಣ ಕೃಪಾಪೋಷಿತ ನಾಟಕ ಮಂಡಳಿಯಿಂದ ಪ್ರದರ್ಶಿಸಿದ ಶಾಂಭವಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನಾಟಕಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿ ಉಳಿದಿರುವುದಕ್ಕೆ ಯುವಕರು, ರಂಗಾಸಕ್ತರು ಹಬ್ಬ–ಹರಿದಿನಗಳಲ್ಲಿ ನಾಟಕ ಆಡುವ ಅಭ್ಯಾಸ ಉಳಿಸಿಕೊಂಡಿರುವುದು ಕಾರಣ. ನಾಟಕಗಳು ಕಲಾವಿದರ ನೈಜ ಅಭಿವ್ಯಕ್ತಿಯನ್ನು ಸಾದರಪಡಿಸುತ್ತವೆ. ಹಳ್ಳಿಗರನ್ನು ಒಗ್ಗೂಡಿಸುವ ನಾಟಕಗಳು ಸದಾ ಜೀವಂತವಾಗಿ ಉಳಿಯಬೇಕು’ ಎಂದು ಸಲಹೆ ನೀಡಿದರು.</p>.<p>ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಮಾತನಾಡಿದರು. ಮುಖಂಡರಾದ ವಿ. ವಿಶ್ವನಾಥ್, ಪಾತ್ರಧಾರಿಗಳಾದ ಚಿತ್ರಜಿತ್ ಯಾದವ್, ಟಿಬಿ ಗೊಲ್ಲರಹಟ್ಟಿ ಎನ್. ಲಕ್ಷ್ಮೀಕಾಂತ್, ಎಂ.ಲೋಕೇಶ್, ನಿಜಲಿಂಗಪ್ಪ, ಶ್ರೀನಿವಾಸ್, ಹರೀಶ್, ವೆಂಕಟೇಶ್, ನಟರಾಜ್, ಎಚ್.ಆರ್. ತಿಪ್ಪೇಸ್ವಾಮಿ, ಜಗದೀಶ್, ಹನುಮಂತಪ್ಪ, ನಿಂಗಣ್ಣ, ನಂದೀಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ‘ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಭಾರತೀಯರನ್ನು ಒಗ್ಗೂಡಿಸುವ ವಿಚಾರದಲ್ಲಿ ರಂಗಭೂಮಿ ಪ್ರಮುಖ ಪಾತ್ರ ವಹಿಸಿತ್ತು. ದೇಸೀ ಸೊಗಡಿನ ಪ್ರತೀಕವಾಗಿರುವ ರಂಗಕಲೆ ನಶಿಸಲು ಬಿಡಬಾರದು’ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ತಿಳಿಸಿದರು.</p>.<p>ನಗರದ ವೇದಾವತಿ ಬಡಾವಣೆಯಲ್ಲಿ ಬುಧವಾರ ರಾತ್ರಿ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಕೃಷ್ಣ ಕೃಪಾಪೋಷಿತ ನಾಟಕ ಮಂಡಳಿಯಿಂದ ಪ್ರದರ್ಶಿಸಿದ ಶಾಂಭವಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನಾಟಕಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿ ಉಳಿದಿರುವುದಕ್ಕೆ ಯುವಕರು, ರಂಗಾಸಕ್ತರು ಹಬ್ಬ–ಹರಿದಿನಗಳಲ್ಲಿ ನಾಟಕ ಆಡುವ ಅಭ್ಯಾಸ ಉಳಿಸಿಕೊಂಡಿರುವುದು ಕಾರಣ. ನಾಟಕಗಳು ಕಲಾವಿದರ ನೈಜ ಅಭಿವ್ಯಕ್ತಿಯನ್ನು ಸಾದರಪಡಿಸುತ್ತವೆ. ಹಳ್ಳಿಗರನ್ನು ಒಗ್ಗೂಡಿಸುವ ನಾಟಕಗಳು ಸದಾ ಜೀವಂತವಾಗಿ ಉಳಿಯಬೇಕು’ ಎಂದು ಸಲಹೆ ನೀಡಿದರು.</p>.<p>ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಮಾತನಾಡಿದರು. ಮುಖಂಡರಾದ ವಿ. ವಿಶ್ವನಾಥ್, ಪಾತ್ರಧಾರಿಗಳಾದ ಚಿತ್ರಜಿತ್ ಯಾದವ್, ಟಿಬಿ ಗೊಲ್ಲರಹಟ್ಟಿ ಎನ್. ಲಕ್ಷ್ಮೀಕಾಂತ್, ಎಂ.ಲೋಕೇಶ್, ನಿಜಲಿಂಗಪ್ಪ, ಶ್ರೀನಿವಾಸ್, ಹರೀಶ್, ವೆಂಕಟೇಶ್, ನಟರಾಜ್, ಎಚ್.ಆರ್. ತಿಪ್ಪೇಸ್ವಾಮಿ, ಜಗದೀಶ್, ಹನುಮಂತಪ್ಪ, ನಿಂಗಣ್ಣ, ನಂದೀಶ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>