ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ ಪೌಷ್ಠಿಕ ಆಹಾರದ ಕೊರತೆ ನೀಗಿಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಮನುಷ್ಯನ ದೇಹದ ಹಲವು ಕಾಯಿಲೆಗಳಿಗೆ ವಿಶೇಷವಾಗಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಮೀನಿನ ಆಹಾರ ಅತ್ಯಂತ ಸೂಕ್ತ. ಸರಳ, ಕಡಿಮೆ ಶ್ರಮ ಹಾಗೂ ಖರ್ಚು ತಗುಲುವ ಮೀನು ಕೃಷಿಯನ್ನು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸಬಹುದಾಗಿದೆ. ವಿವಿಧ ತಳಿಯ ಮೀನುಗಳನ್ನು ಉತ್ಪಾದಿಸುವ ಮೂಲಕ ನಿರಂತರ ಆದಾಯ ಪಡೆದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಚೇತರಿಸುವಂತೆ ಮಾಡಿಕೊಳ್ಳಬಹುದು. ಮೀನು ಕೃಷಿ ಉತ್ತೇಜಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೆ ತಂದಿದ್ದು, ರೈತರು ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಅವರು ತಿಳಿಸಿದರು.