ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮೊಳಕಾಲ್ಮುರು | ಬಿಸಿಲು: ಮೇವಿಲ್ಲದೇ ಜಾನುವಾರು ಹೈರಾಣು

Published : 9 ಮೇ 2024, 8:22 IST
Last Updated : 9 ಮೇ 2024, 8:22 IST
ಫಾಲೋ ಮಾಡಿ
Comments
ಮೊಳಕಾಲ್ಮುರು ತಾಲ್ಲೂಕಿನ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ದೇವರ ಎತ್ತುಗಳು ಮೇವಿಲ್ಲದೇ ಸೊರಗಿರುವುದು
ಮೊಳಕಾಲ್ಮುರು ತಾಲ್ಲೂಕಿನ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ದೇವರ ಎತ್ತುಗಳು ಮೇವಿಲ್ಲದೇ ಸೊರಗಿರುವುದು
ಗೋಶಾಲೆಗಳನ್ನು ಅವೈಜ್ಞಾನಿಕವಾಗಿ ಆರಂಭಿಸಲಾಗಿದೆ. ಮೇವಿನ ಬ್ಯಾಂಕ್‌ ಆರಂಭಕ್ಕೂ ಕ್ರಮ ಕೈಗೊಂಡಿಲ್ಲ. ಬಿರುಬಿಸಿಲಿನಲ್ಲಿ ದನಗಳನ್ನು 20-25 ಕಿ.ಮೀ. ಹೊಡೆದುಕೊಂಡು ಹೋಗಿ ಬುರಲು ಸಾಧ್ಯವೇ?.
ಬೇಡರೆಡ್ಡಿಹಳ್ಳಿ ಬಸವರೆಡ್ಡಿ ರಾಜ್ಯ ಉಪಾಧ್ಯಕ್ಷ ರೈತಸಂಘ
ಸದ್ಯ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಮಳೆ ವಿಳಂಬವಾದಲ್ಲಿ ಸಮಸ್ಯೆ ತೀವ್ರವಾಗಲಿದೆ. ಟ್ಯಾಂಕರ್‌ ಮೂಲಕ ಸರಬರಾಜು ಮಾಡುವ ಸ್ಥಿತಿ ಎದುರಾಗಬಹುದು.
ಕೆ.ಆರ್.‌ ಪ್ರಕಾಶ್‌ ಇಒ. ತಾ.ಪಂ. ಮೊಳಕಾಲ್ಮುರು
ಕೂಲಿ ಕಾರ್ಮಿಕರಿಗೆ ಸಮಸ್ಯೆ
ಬಿಸಿಲಿನ ತೀವ್ರತೆ ಹೆಚ್ಚಿರುವುದು ದಿನಗೂಲಿಗಳಿಗೆ ಹೆಚ್ಚು ಸಂಕಷ್ಟ ಉಂಟುಮಾಡಿದೆ. ಕೃಷಿ ಕಾರ್ಯ ಬೆಳಿಗ್ಗೆ 6.30ರಿಂದ ಕೆಲಸ ಆರಂಭವಾಗುತ್ತಿದೆ. ಕೆಲ ತೋಟದ ಮಾಲೀಕರು ಬಿಸಿಲಿನ ಝಳ ನೋಡಿ ಬೇಗ ಮನೆಗೆ ಕಳಿಸುತ್ತಾರೆ. ಮತ್ತೆ ಕೆಲವರು ಮಧ್ಯಾಹ್ನ 1 ಗಂಟೆ ತನಕ ಕೆಲಸ ಮಾಡಿ ಎಂದು ತಾಕೀತು ಮಾಡುತ್ತಾರೆ. ನಿತ್ಯ ₹ 200 ಕೂಲಿ ನೀಡುತ್ತಾರೆ. ಬಿಸಿಲಿನಿಂದ ಜ್ವರ ಬಂದಲ್ಲಿ ಆಸ್ಪತ್ರೆಗೆ ಖರ್ಚಿಗೆ ದುಪ್ಪಟ್ಟು ಕೊಡಬೇಕಿದೆ ಎಂದು ಕಾರ್ಮಿಕ ಮಹಿಳೆ ಶಾಂತಮ್ಮ ಅಳಲು ತೋಡಿಕೊಂಡರು. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದಲ್ಲಿ 3 ತಿಂಗಳಾದರೂ ಕೂಲಿ ನೀಡುವುದಿಲ್ಲ. ಅರ್ಜಿ ಹಾಕಿ ಕೆಲಸ ಮಾಡಿ ಪ್ರತಿಭಟನೆ ಮಾಡಿ ಕೂಲಿ ಪಡೆಯಬೇಕಿದೆ. ಆದ್ದರಿಂದ ಯೋಜನೆಗಳ ಸಹವಾಸ ಬೇಡ ಎಂದು ಅನೇಕ ಕಾರ್ಮಿಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT