ಒಂದು ಶಾಲೆಯ ಅಳಿವು–ಉಳಿವು, ಏಳಿಗೆ–ವಿನಾಶ ಎಲ್ಲವೂ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ಬದ್ಧತೆ ತೋರಿ ಮಕ್ಕಳಲ್ಲಿನ ಜಾಣ್ಮೆಯನ್ನು ಗುರುತಿಸಿ, ಅವರ ಶ್ರೇಯಸ್ಸಿಗೆ ಶ್ರಮಿಸಬೇಕು ಎಂದರು. ರಾಜ್ಯದಲ್ಲಿ ಹಲವು ಗುಣಮಟ್ಟದ ಶಾಲೆಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಹೆಚ್ಚು ಗಮನ ಸೆಳೆದಿದ್ದು ಈ ಶಾಲೆ. ಸಾರ್ವಜನಿಕರ ಸಹಭಾಗಿತ್ವ ದೊರೆತರೆ ಒಂದು ಸರ್ಕಾರಿ ಶಾಲೆಯನ್ನು ಹೇಗೆಲ್ಲಾ ಅಭಿವೃದ್ಧಿಪಡಿಸಲು ಸಾಧ್ಯ ಎಂಬುದನ್ನು ಇಲ್ಲಿ ನೋಡಬಹುದು. ಇಷ್ಟೆಲ್ಲ ಸೌಲಭ್ಯಗಳಿದ್ದಾಗ ಶಿಕ್ಷಕರು ಅದಕ್ಕ ತಕ್ಕಂತೆ ತಮ್ಮನ್ನು ಬೋಧನೆಗೆ ಅರ್ಪಿಸಿಕೊಳ್ಳಬೇಕು. ಕಂಪ್ಯೂಟರ್ನ ಸ್ಮರಣೆಗೆ ಮಿತಿ ಇದೆ. ಆದರೆ ನಮ್ಮ ಬುದ್ಧಿ, ಮಿದುಳಿಗೆ ಮಿತಿ ಎನ್ನುವುದು ಇಲ್ಲ. ಮಿದುಳಿಗೆ ಕೆಲಸ ಕೊಟ್ಟು ದುಡಿದರೆ ಮಕ್ಕಳಿಗೆ ಒಳಿತಾಗುತ್ತದೆ. ಇದರಿಂದ ಪೋಷಕರಿಗೆ, ಸಮಾಜಕ್ಕೆ, ದೇಶಕ್ಕೆ ಒಳಿತಾಗುತ್ತದೆ’ ಎಂದು ಅವರು ಸಲಹೆ ನೀಡಿದರು.