‘ಇಲ್ಲಿನ ಎಂ.ಕೆ. ಹಟ್ಟಿಯ ಮುರುಘಾರಾಜೇಂದ್ರ ನಗರದ ಅನುದಾನರಹಿತ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ 1992ರಲ್ಲಿ ಸೇವೆಗೆ ಸೇರಿದೆ. ಸತತ 17 ವರ್ಷ ಉಚಿತವಾಗಿ ಸೇವೆ ಸಲ್ಲಿಸಿದ್ದೇನೆ. ನಂತರ 10 ವರ್ಷ ಸರ್ಕಾರದ ವೇತನ ಪಡೆದು 2020ರಲ್ಲಿ ನಿವೃತ್ತಿ ಹೊಂದಿದ್ದೇನೆ. ಆದರೆ, ನಿವೃತ್ತಿ ನಂತರ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.