<p><strong>ಹೊಸದುರ್ಗ: </strong>ಕಡುಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ, ಇಲ್ಲಿನ ಗಣಿಗಾರಿಕೆಯ ಕಂದಕದಲ್ಲಿ ತಿಳಿಯಾದ ಜೀವಜಲವಿದ್ದು, ಕಾಡುಪ್ರಾಣಿ, ಜಲಚರಗಳಿಗೆ ಆಸರೆಯಾಗಿದೆ.</p>.<p>ತಾಲ್ಲೂಕಿನ ಮತ್ತೋಡು ಹೋಬಳಿಯ ಕಪ್ಪನಾಯಕನಹಳ್ಳಿ ಸಮೀಪದ ನಿರ್ಜನ ಪ್ರದೇಶ ಅಮರಕಲ್ಲು ಗುಡ್ಡದ ಗಣಿಗಾರಿಕೆ ಪ್ರದೇಶದಲ್ಲಿ 1 ಕಿ.ಮೀ ಉದ್ದ, 60 ಅಡಿ ಅಗಲವಿರುವ ಆಳವಾದ ಗುಂಡಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ.</p>.<p>ಮತ್ತೋಡಿನಿಂದ ಕಪ್ಪನಾಯಕನಹಳ್ಳಿ ಮಾರ್ಗವಾಗಿ ಕಂಚೀಪುರ ಗ್ರಾಮಕ್ಕೆ ಸಾಗುವಾಗ ಈ ಜೀವಜಲ ಕಾಣಸಿಗುತ್ತದೆ. ದಶಕದ ಹಿಂದೆ ಇಲ್ಲಿದ್ದ ಐತಿಹಾಸಿಕ ಅಮರಕಲ್ಲು ಗುಡ್ಡ ಅಕ್ರಮ ಗಣಿಗಾರಿಕೆಯಿಂದಾಗಿ ಸಂಪೂರ್ಣ ಹಾಳಾಗಿದೆ. ನೂರಾರು ಅಡಿ ಆಳದವರೆಗೂ ಗುಡ್ಡವನ್ನು ಬಗೆದಿರುವ ಕಲ್ಲುಕ್ವಾರಿಯ ಬೃಹತ್ತಾದ ಗುಂಡಿಯಲ್ಲಿ ನಿಂತಿರುವ ನೀರು ಗಮನ ಸೆಳೆಯುತ್ತಿದೆ.</p>.<p>ಮಳೆಗಾಲದಲ್ಲಿ ಈ ಭಾಗದ ಗುಡ್ಡದ ಮೇಲೆ ಬೀಳುವ ಮಳೆ ನೀರು ಹರಿದು ಬಂದು ನೂರಾರು ಅಡಿ ಆಳದ ಗುಂಡಿ ಭರ್ತಿಯಾಗುತ್ತದೆ. ಆಗ ಈ ಗುಂಡಿಯನ್ನು ಹತ್ತಿರದಿಂದ ನೋಡುವುದಕ್ಕೂ ಭಯವಾಗುತ್ತದೆ. ಬೇಸಿಗೆಯ ಬಿಸಿಲಿನ ಝಳ ಹೆಚ್ಚಾದಾಗ ಸುತ್ತಮುತ್ತಲಿನ ಕೆರೆಕಟ್ಟೆ, ಬ್ಯಾರೇಜ್, ಚೆಕ್ಡ್ಯಾಂ, ಗೋಕಟ್ಟೆಗಳು ಸಂಪೂರ್ಣ ಬರಿದಾಗುತ್ತವೆ. ಇಂತಹ ಸಮಯದಲ್ಲಿಯೂ ಈ ಗುಂಡಿಯಲ್ಲಿ 20 ಅಡಿ ಆಳದವರೆಗೂ ನೀರು ನಿಂತಿರುವುದು ನೋಡುಗರಿಗೆ ಅಚ್ಚರಿಯನ್ನುಂಟು ಮಾಡಿದೆ.</p>.<p>‘ಇಲ್ಲಿಗೆ 4 ಕಿ.ಮೀ ಸಮೀಪದಲ್ಲಿಯೇ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶವಿದೆ. ಎರಡು ವರ್ಷಗಳಿಂದ ಭದ್ರಾ ಜಲಾಶಯದ ನೀರನ್ನು ವೇದಾವತಿ ನದಿ ಮೂಲಕ ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ. ಇದರಿಂದಾಗಿ ಬೇಸಿಗೆಯಲ್ಲೂ ಈ ಗುಂಡಿಯಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ನೀರು ಮೇಲಕ್ಕೆ ಬಂದಿದೆ. ಸಾಕಷ್ಟು ನೀರು ನಿಂತಿದ್ದರೂ ಜಾನುವಾರು ಕುಡಿಯಲಿಕ್ಕೆ ಹಾಗೂ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಆಗುತ್ತಿಲ್ಲ. ಇಲ್ಲಿಗೆ ಯಾರೂ ಬರದಂತೆ ಸಿಮೆಂಟ್ ಕಂಪನಿಯವರು ಪ್ರವೇಶ ನಿರ್ಬಂಧಿಸಿದ್ದಾರೆ’ ಎನ್ನುತ್ತಾರೆ ಕಂಚೀಪುರ ಡಿ. ಪರುಶುರಾಮಪ್ಪ, ಮತ್ತೋಡು ರಾಮಪ್ಪ.</p>.<p>ದಶಕದ ಹಿಂದೆ ಮತ್ತೋಡು, ದೊಡ್ಡಬ್ಯಾಲದಕೆರೆ, ಚಿಕ್ಕಬ್ಯಾಲದಕೆರೆ, ಕಂಚೀಪುರ, ಲಕ್ಕಿಹಳ್ಳಿ ಸುತ್ತಮುತ್ತಲೂ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿಯೇ ಅಕ್ರಮವಾಗಿ ಗಣಿಗಾರಿಕೆ ನಡೆದಿತ್ತು. ಆಗ ಇಲ್ಲಿ 9 ಗಣಿ ಕಂಪನಿಗಳಿದ್ದವು. ಇದರಿಂದಾಗಿ ಓಬಳಾಪುರ ಗಣಿ ಪ್ರದೇಶದಲ್ಲಿಯೂ ಅಗೆಯದಷ್ಟು ಭೂಮಿಯನ್ನು ಇಲ್ಲಿ ಬಗೆಯಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಡೂರು ಗಣಿಗಿಂತಲೂ ದೊಡ್ಡ ಪ್ರಮಾಣದ ಗಣಿಗಾರಿಕೆ ಗುಂಡಿಗಳು ಕಾಣಿಸುತ್ತವೆ. ಆದರೆ, ಗಣಿಗಾರಿಕೆಯಿಂದ ಈ ಪ್ರದೇಶದ ರಸ್ತೆ, ಶಾಲೆ, ಆಸ್ಪತ್ರೆ, ಜನರ ಮನೆಗಳಿಗೆ ಸಾಕಷ್ಟು ಹಾನಿಯಾಗಿತ್ತು. ದಶಕ ಕಳೆದರೂ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಜಿಲ್ಲಾಡಳಿತ್ತು ಕಾಳಜಿ ವಹಿಸದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮತ್ತೋಡು ಹೋಬಳಿ ನಾಗರಿಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ: </strong>ಕಡುಬೇಸಿಗೆಯ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ, ಇಲ್ಲಿನ ಗಣಿಗಾರಿಕೆಯ ಕಂದಕದಲ್ಲಿ ತಿಳಿಯಾದ ಜೀವಜಲವಿದ್ದು, ಕಾಡುಪ್ರಾಣಿ, ಜಲಚರಗಳಿಗೆ ಆಸರೆಯಾಗಿದೆ.</p>.<p>ತಾಲ್ಲೂಕಿನ ಮತ್ತೋಡು ಹೋಬಳಿಯ ಕಪ್ಪನಾಯಕನಹಳ್ಳಿ ಸಮೀಪದ ನಿರ್ಜನ ಪ್ರದೇಶ ಅಮರಕಲ್ಲು ಗುಡ್ಡದ ಗಣಿಗಾರಿಕೆ ಪ್ರದೇಶದಲ್ಲಿ 1 ಕಿ.ಮೀ ಉದ್ದ, 60 ಅಡಿ ಅಗಲವಿರುವ ಆಳವಾದ ಗುಂಡಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ.</p>.<p>ಮತ್ತೋಡಿನಿಂದ ಕಪ್ಪನಾಯಕನಹಳ್ಳಿ ಮಾರ್ಗವಾಗಿ ಕಂಚೀಪುರ ಗ್ರಾಮಕ್ಕೆ ಸಾಗುವಾಗ ಈ ಜೀವಜಲ ಕಾಣಸಿಗುತ್ತದೆ. ದಶಕದ ಹಿಂದೆ ಇಲ್ಲಿದ್ದ ಐತಿಹಾಸಿಕ ಅಮರಕಲ್ಲು ಗುಡ್ಡ ಅಕ್ರಮ ಗಣಿಗಾರಿಕೆಯಿಂದಾಗಿ ಸಂಪೂರ್ಣ ಹಾಳಾಗಿದೆ. ನೂರಾರು ಅಡಿ ಆಳದವರೆಗೂ ಗುಡ್ಡವನ್ನು ಬಗೆದಿರುವ ಕಲ್ಲುಕ್ವಾರಿಯ ಬೃಹತ್ತಾದ ಗುಂಡಿಯಲ್ಲಿ ನಿಂತಿರುವ ನೀರು ಗಮನ ಸೆಳೆಯುತ್ತಿದೆ.</p>.<p>ಮಳೆಗಾಲದಲ್ಲಿ ಈ ಭಾಗದ ಗುಡ್ಡದ ಮೇಲೆ ಬೀಳುವ ಮಳೆ ನೀರು ಹರಿದು ಬಂದು ನೂರಾರು ಅಡಿ ಆಳದ ಗುಂಡಿ ಭರ್ತಿಯಾಗುತ್ತದೆ. ಆಗ ಈ ಗುಂಡಿಯನ್ನು ಹತ್ತಿರದಿಂದ ನೋಡುವುದಕ್ಕೂ ಭಯವಾಗುತ್ತದೆ. ಬೇಸಿಗೆಯ ಬಿಸಿಲಿನ ಝಳ ಹೆಚ್ಚಾದಾಗ ಸುತ್ತಮುತ್ತಲಿನ ಕೆರೆಕಟ್ಟೆ, ಬ್ಯಾರೇಜ್, ಚೆಕ್ಡ್ಯಾಂ, ಗೋಕಟ್ಟೆಗಳು ಸಂಪೂರ್ಣ ಬರಿದಾಗುತ್ತವೆ. ಇಂತಹ ಸಮಯದಲ್ಲಿಯೂ ಈ ಗುಂಡಿಯಲ್ಲಿ 20 ಅಡಿ ಆಳದವರೆಗೂ ನೀರು ನಿಂತಿರುವುದು ನೋಡುಗರಿಗೆ ಅಚ್ಚರಿಯನ್ನುಂಟು ಮಾಡಿದೆ.</p>.<p>‘ಇಲ್ಲಿಗೆ 4 ಕಿ.ಮೀ ಸಮೀಪದಲ್ಲಿಯೇ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶವಿದೆ. ಎರಡು ವರ್ಷಗಳಿಂದ ಭದ್ರಾ ಜಲಾಶಯದ ನೀರನ್ನು ವೇದಾವತಿ ನದಿ ಮೂಲಕ ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ. ಇದರಿಂದಾಗಿ ಬೇಸಿಗೆಯಲ್ಲೂ ಈ ಗುಂಡಿಯಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ನೀರು ಮೇಲಕ್ಕೆ ಬಂದಿದೆ. ಸಾಕಷ್ಟು ನೀರು ನಿಂತಿದ್ದರೂ ಜಾನುವಾರು ಕುಡಿಯಲಿಕ್ಕೆ ಹಾಗೂ ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಆಗುತ್ತಿಲ್ಲ. ಇಲ್ಲಿಗೆ ಯಾರೂ ಬರದಂತೆ ಸಿಮೆಂಟ್ ಕಂಪನಿಯವರು ಪ್ರವೇಶ ನಿರ್ಬಂಧಿಸಿದ್ದಾರೆ’ ಎನ್ನುತ್ತಾರೆ ಕಂಚೀಪುರ ಡಿ. ಪರುಶುರಾಮಪ್ಪ, ಮತ್ತೋಡು ರಾಮಪ್ಪ.</p>.<p>ದಶಕದ ಹಿಂದೆ ಮತ್ತೋಡು, ದೊಡ್ಡಬ್ಯಾಲದಕೆರೆ, ಚಿಕ್ಕಬ್ಯಾಲದಕೆರೆ, ಕಂಚೀಪುರ, ಲಕ್ಕಿಹಳ್ಳಿ ಸುತ್ತಮುತ್ತಲೂ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿಯೇ ಅಕ್ರಮವಾಗಿ ಗಣಿಗಾರಿಕೆ ನಡೆದಿತ್ತು. ಆಗ ಇಲ್ಲಿ 9 ಗಣಿ ಕಂಪನಿಗಳಿದ್ದವು. ಇದರಿಂದಾಗಿ ಓಬಳಾಪುರ ಗಣಿ ಪ್ರದೇಶದಲ್ಲಿಯೂ ಅಗೆಯದಷ್ಟು ಭೂಮಿಯನ್ನು ಇಲ್ಲಿ ಬಗೆಯಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಡೂರು ಗಣಿಗಿಂತಲೂ ದೊಡ್ಡ ಪ್ರಮಾಣದ ಗಣಿಗಾರಿಕೆ ಗುಂಡಿಗಳು ಕಾಣಿಸುತ್ತವೆ. ಆದರೆ, ಗಣಿಗಾರಿಕೆಯಿಂದ ಈ ಪ್ರದೇಶದ ರಸ್ತೆ, ಶಾಲೆ, ಆಸ್ಪತ್ರೆ, ಜನರ ಮನೆಗಳಿಗೆ ಸಾಕಷ್ಟು ಹಾನಿಯಾಗಿತ್ತು. ದಶಕ ಕಳೆದರೂ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಜಿಲ್ಲಾಡಳಿತ್ತು ಕಾಳಜಿ ವಹಿಸದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮತ್ತೋಡು ಹೋಬಳಿ ನಾಗರಿಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>