ದಶಕದ ಹಿಂದೆ ಮತ್ತೋಡು, ದೊಡ್ಡಬ್ಯಾಲದಕೆರೆ, ಚಿಕ್ಕಬ್ಯಾಲದಕೆರೆ, ಕಂಚೀಪುರ, ಲಕ್ಕಿಹಳ್ಳಿ ಸುತ್ತಮುತ್ತಲೂ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿಯೇ ಅಕ್ರಮವಾಗಿ ಗಣಿಗಾರಿಕೆ ನಡೆದಿತ್ತು. ಆಗ ಇಲ್ಲಿ 9 ಗಣಿ ಕಂಪನಿಗಳಿದ್ದವು. ಇದರಿಂದಾಗಿ ಓಬಳಾಪುರ ಗಣಿ ಪ್ರದೇಶದಲ್ಲಿಯೂ ಅಗೆಯದಷ್ಟು ಭೂಮಿಯನ್ನು ಇಲ್ಲಿ ಬಗೆಯಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಡೂರು ಗಣಿಗಿಂತಲೂ ದೊಡ್ಡ ಪ್ರಮಾಣದ ಗಣಿಗಾರಿಕೆ ಗುಂಡಿಗಳು ಕಾಣಿಸುತ್ತವೆ. ಆದರೆ, ಗಣಿಗಾರಿಕೆಯಿಂದ ಈ ಪ್ರದೇಶದ ರಸ್ತೆ, ಶಾಲೆ, ಆಸ್ಪತ್ರೆ, ಜನರ ಮನೆಗಳಿಗೆ ಸಾಕಷ್ಟು ಹಾನಿಯಾಗಿತ್ತು. ದಶಕ ಕಳೆದರೂ ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಜಿಲ್ಲಾಡಳಿತ್ತು ಕಾಳಜಿ ವಹಿಸದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮತ್ತೋಡು ಹೋಬಳಿ ನಾಗರಿಕರು.