ಗದಗ ಜಿಲ್ಲೆಯ ಹುಯಿಲಗೋಳದ ರೈತರಾದ ಪ್ರಶಾಂತ್ ಹಟ್ಟಿ (36), ಗುರಪ್ಪ ಈರಪ್ಪ ಹೂಗಾರ (30) ಹಾಗೂ ರಮೇಶ ಅಲಿಯಾಸ್ ರಾಮನಗೌಡ ಪಾಟೀಲ, (26) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸುರೇಶ ಕಳಕಪ್ಪ ಹುನುಗುಂದಿ (30) ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹುಯಿಲಗೋಳದ ಸಂಗಪ್ಪ ತಿಪ್ಪಣ್ಣ ಹಂಚಿನಾಳ್ ಹಾಗೂ ಮಧುಗಿರಿ ತಾಲ್ಲೂಕಿನ ಗಿರಿಯನಪಾಳ್ಯದ ಲಾರಿ ಕ್ಲೀನರ್ ಆನಂದ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.