‘ಮಹಾದೇವಮ್ಮ ಕನ್ನಡ ಕಲಿತು 70 ವಚನಗಳನ್ನು ರಚಿಸಿದ್ದಾರೆ. ಎನ್ನಯ್ಯ ಪ್ರಿಯ ನಿಃಕಳಂಕ ಮಲ್ಲಿಕಾರ್ಜುನ ಎನ್ನುವುದು ಇವರ ಅಂಕಿತ. ಇವರ ವಚನಗಳಲ್ಲಿ ಲಿಂಗಾಂಗ ಸಮರಸದ ಸುಖವನ್ನು, ಭಕ್ತಿಯ ವಿಚಾರವನ್ನು ಪ್ರಸ್ತಾಪಿಸುವರು. ಅಲ್ಲದೇ ಶ್ರದ್ಧೆ, ಭಕ್ತಿ, ನಿಷ್ಠೆಗಳಿಲ್ಲದ ಪೂಜೆ ವ್ಯರ್ಥ, ಯಾಂತ್ರಿಕ ಆಚರಣೆಗಳಿಗಿಂತ ಆಂತರಿಕ ಪಕ್ವತೆ ಮುಖ್ಯ. ಸಂಸಾರದ ಭ್ರಮೆಯಿಂದ ಹೊರಬಂದು ಪರಮಜ್ಞಾನಿಗಳಾಗಿ ಪರಮ ಚೈತನ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಜ ಸುಖವಿದೆ. ಪೂಜೆ ಯಾಂತ್ರಿಕೆಯಾಗದೆ ಸರ್ವಾಂಗವೂ ಲಿಂಗವಾಗಬೇಕು. ಜ್ಞಾನ ಮತ್ತು ಕ್ರಿಯೆ ಒಂದಾಗಬೇಕು ಎನ್ನುವ ಸಂದೇಶಗಳೊಂದಿಗೆ ಡಾಂಭಿಕ ಭಕ್ತಿಯ ವಿಡಂಬನೆಯೂ ಇದೆ’ ಎಂದು ವಿಶ್ಲೇಷಿಸಿದರು.