ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊಳಕಾಲ್ಮುರು ತಾಲ್ಲೂಕಿಗೆ ವಿಶೇಷ ಸ್ಥಾನ ಲಭ್ಯವಾದರೆ ಇನ್ನಷ್ಟು ಅನುದಾನ ಹರಿದುಬರುತ್ತದೆ. ಹಿಂದುಳಿದ ತಾಲ್ಲೂಕಿನ ಜನರ ಏಳಿಗೆಗೆ ಇದು ನೆರವಾಗಲಿದೆ. ಆದರೆ, ಮೊಳಕಾಲ್ಮುರನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವ ವಿಚಾರದಲ್ಲಿ ಹೋರಾಟಗಾರರು ಹಾಗೂ ಜನರ ಅಭಿಪ್ರಾಯವೇ ಅಂತಿಮ’ ಎಂದು ಹೇಳಿದರು.