<p><strong>ಮೊಳಕಾಲ್ಮುರು:</strong> ಪಟ್ಟಣದ ಎಸ್ಬಿಐ ಬಳಿ ಕಿಡಿಗೇಡಿಗಳು ಬೈಕ್ ಪಂಕ್ಚರ್ ಮಾಡಿ ಸವಾರರ ಗಮನ ಬೇರೆಡೆ ಸೆಳೆದು ಬೈಕ್ನ ಬ್ಯಾಗ್ನಲ್ಲಿಟ್ಟಿದ್ದ ₹ 5 ಲಕ್ಷ ಸೋಮವಾರ ಲಪಟಾಯಿಸಿದ್ದಾರೆ.</p>.<p>ತಾಲ್ಲೂಕಿನ ದೇವಸಮುದ್ರ ಹೋಬಳಿಯ ಕೋನಾಪುರ ಗ್ರಾಮದ ಪ್ರೌಢಶಾಲಾ ಶಿಕ್ಷಕ ಸೋಮಶೇಖರ್ ಹಣ ಕಳೆದುಕೊಂಡವರು. ತಮ್ಮೇನಹಳ್ಳಿಯ ಎಸ್ಬಿಐ ಶಾಖೆಯಿಂದ ₹ 1 ಲಕ್ಷ, ಪಟ್ಟಣದ ಎಸ್ಬಿಐ ಶಾಖೆಯಿಂದ ₹ 4 ಲಕ್ಷ ಡ್ರಾ ಮಾಡಿಕೊಂಡು ತಮ್ಮ ಬೈಕ್ನ ಬ್ಯಾಗ್ನಲ್ಲಿ ಇಟ್ಟಿದ್ದರು. ಬೈಕ್ ಪಂಕ್ಚರ್ ಆಗಿರುವುದನ್ನು ಗಮನಿಸಿದ ಅವರು ಗ್ಯಾರೇಜ್ನತ್ತ ಬೈಕ್ ತಳ್ಳಿಕೊಂಡು ಹೊರಟಿದ್ದರು.</p>.<p>ಈ ವೇಳೆ ಹಲವು ಬಾರಿ ಅಡ್ಡ ಬಂದ ಅಪರಿಚಿತರು ಬೈಕ್ನ ಸೈಡ್ಬ್ಯಾಗ್ನಲ್ಲಿದ್ದ ಹಣ ಅಪಹರಿಸಿ ಪರಾರಿಯಾಗಿದ್ದಾರೆ.</p>.<p>ಸೋಮಶೇಖರ್ ಅವರ ಚಲನವಲನ ಗಮನಿಸಿದ್ದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.</p>.<p>ಪಟ್ಟಣ ಠಾಣೆಯಲ್ಲಿ ಸೋಮಶೇಖರ್ ದೂರು ದಾಖಲಿಸಿದ್ದಾರೆ.</p>.<p>‘ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗಿದ್ದು ಕಿಡಿಗೇಡಿಗಳ ಪತ್ತೆಗೆ ಜಾಲ ಬೀಸಲಾಗಿದೆ’ ಎಂದು ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ಪಟ್ಟಣದ ಎಸ್ಬಿಐ ಬಳಿ ಕಿಡಿಗೇಡಿಗಳು ಬೈಕ್ ಪಂಕ್ಚರ್ ಮಾಡಿ ಸವಾರರ ಗಮನ ಬೇರೆಡೆ ಸೆಳೆದು ಬೈಕ್ನ ಬ್ಯಾಗ್ನಲ್ಲಿಟ್ಟಿದ್ದ ₹ 5 ಲಕ್ಷ ಸೋಮವಾರ ಲಪಟಾಯಿಸಿದ್ದಾರೆ.</p>.<p>ತಾಲ್ಲೂಕಿನ ದೇವಸಮುದ್ರ ಹೋಬಳಿಯ ಕೋನಾಪುರ ಗ್ರಾಮದ ಪ್ರೌಢಶಾಲಾ ಶಿಕ್ಷಕ ಸೋಮಶೇಖರ್ ಹಣ ಕಳೆದುಕೊಂಡವರು. ತಮ್ಮೇನಹಳ್ಳಿಯ ಎಸ್ಬಿಐ ಶಾಖೆಯಿಂದ ₹ 1 ಲಕ್ಷ, ಪಟ್ಟಣದ ಎಸ್ಬಿಐ ಶಾಖೆಯಿಂದ ₹ 4 ಲಕ್ಷ ಡ್ರಾ ಮಾಡಿಕೊಂಡು ತಮ್ಮ ಬೈಕ್ನ ಬ್ಯಾಗ್ನಲ್ಲಿ ಇಟ್ಟಿದ್ದರು. ಬೈಕ್ ಪಂಕ್ಚರ್ ಆಗಿರುವುದನ್ನು ಗಮನಿಸಿದ ಅವರು ಗ್ಯಾರೇಜ್ನತ್ತ ಬೈಕ್ ತಳ್ಳಿಕೊಂಡು ಹೊರಟಿದ್ದರು.</p>.<p>ಈ ವೇಳೆ ಹಲವು ಬಾರಿ ಅಡ್ಡ ಬಂದ ಅಪರಿಚಿತರು ಬೈಕ್ನ ಸೈಡ್ಬ್ಯಾಗ್ನಲ್ಲಿದ್ದ ಹಣ ಅಪಹರಿಸಿ ಪರಾರಿಯಾಗಿದ್ದಾರೆ.</p>.<p>ಸೋಮಶೇಖರ್ ಅವರ ಚಲನವಲನ ಗಮನಿಸಿದ್ದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.</p>.<p>ಪಟ್ಟಣ ಠಾಣೆಯಲ್ಲಿ ಸೋಮಶೇಖರ್ ದೂರು ದಾಖಲಿಸಿದ್ದಾರೆ.</p>.<p>‘ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗಿದ್ದು ಕಿಡಿಗೇಡಿಗಳ ಪತ್ತೆಗೆ ಜಾಲ ಬೀಸಲಾಗಿದೆ’ ಎಂದು ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>