<p><strong>ನಾಯಕನಹಟ್ಟಿ: </strong>ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಧಾರವಾಗುವುದು ಗುಣಮಟ್ಟದ ಶಿಕ್ಷಕರಿಂದ ಮಾತ್ರ ಎಂದು ಐಐಎಸ್ಸಿ ಕೌಶಲಾಭಿವೃದ್ಧಿ ಕೇಂದ್ರದ ಸಂಚಾಲಕ ಬಿ.ಸುಬ್ಬಾರೆಡ್ಡಿ ಹೇಳಿದರು.</p>.<p>ಹೋಬಳಿಯ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್ನಲ್ಲಿ ಬುಧವಾರ ಒಡಿಶಾದ 110 ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>ದೇಶದ ಭವಿಷ್ಯ ಅಡಗಿರುವುದು ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಯಾದಾಗ ಮಾತ್ರ. ಹಾಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಮೊದಲು ಗುಣಮಟ್ಟದ ಬೋಧನಾ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಕಲಿಕಾ ಕೌಶಲವಿರುವ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗಲು ಸಾಧ್ಯ ಎಂದರು.</p>.<p>ಗುಣಮಟ್ಟದ ಶಿಕ್ಷಣಕ್ಕೆ ಐಐಎಸ್ಸಿ ಪ್ರಖ್ಯಾತಿ ಪಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ 400 ಎಕರೆ ಭೂಮಿಯನ್ನು ಮತ್ತು ₹50,000ವನ್ನು ಆರಂಭಿಕ ಧನಸಹಾಯವಾಗಿ ನೀಡಿದ್ದರು. ಜೆಮ್ಷೆಡ್ಜಿ ಟಾಟಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದಿಂದ ಸಂಸ್ಥೆ ಆರಂಭವಾಯಿತು. ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಐಐಎಸ್ಸಿ ಕ್ಯಾಂಪಸ್ಸಿನಲ್ಲಿ ಪಿಎಚ್ಡಿ ಸಂಶೋಧನೆ ಆರಂಭಕ್ಕೆ ಸಿದ್ಧತೆಗಳನ್ನು ನಡೆಯುತ್ತಿದೆ ಎಂದರು.</p>.<p>ಅಂಡಮಾನ್, ನಿಕೋಬರ್ ದ್ವೀಪಗಳು ಸೇರಿದಂತೆ ದೇಶದ ಎಲ್ಲೆಡೆಯ ಸುಮಾರು 25 ಸಾವಿರ ಶಿಕ್ಷಕರು ಇಲ್ಲಿ ತರಬೇತಿ ಪಡೆದಿದ್ದಾರೆ. ಬೆಳಗ್ಗೆ 7ಗಂಟೆಯಿಂದ ಸಂಜೆ 7 ಗಂಟೆಯವರೆಗೆ 11 ದಿನ ನಿರಂತರವಾಗಿ ತರಬೇತಿ ನೀಡಲಾಗುವುದು. ಸಂಸ್ಥೆಯ ನುರಿತ ಸಿಬ್ಬಂದಿ ಶಿಕ್ಷಕರ ಕಲಿಕೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.</p>.<p>ಪ್ರೌಢಶಾಲೆ ಶಿಕ್ಷಕರು ಬೋಧನೆಗೆ ಸೀಮಿತರಾಗದೆ ಸಂಶೋಧನೆಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ತರಗತಿಯಲ್ಲಿ ಮಕ್ಕಳು ಪ್ರಶ್ನಿಸುವ ವಾತಾವರಣವನ್ನು ಸೃಷ್ಟಿಸಬೇಕು ಎಂದು ಡಾ.ಕೆ.ಆರ್.ಪ್ರಭು ಸಲಹೆ ನೀಡಿದರು.</p>.<p>ಡಾ.ಕಿಶೋರ್, ಡಾ.ರಾಘವೇಂದ್ರ, ಡಾ.ಪ್ರಸನ್ನ, ಎಂಜಿನಿಯರ್ ಹೇಮಂತ್ಕುಮಾರ್ ಸೇರಿದಂತೆ ಐಐಎಸ್ಸಿ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕನಹಟ್ಟಿ: </strong>ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಧಾರವಾಗುವುದು ಗುಣಮಟ್ಟದ ಶಿಕ್ಷಕರಿಂದ ಮಾತ್ರ ಎಂದು ಐಐಎಸ್ಸಿ ಕೌಶಲಾಭಿವೃದ್ಧಿ ಕೇಂದ್ರದ ಸಂಚಾಲಕ ಬಿ.ಸುಬ್ಬಾರೆಡ್ಡಿ ಹೇಳಿದರು.</p>.<p>ಹೋಬಳಿಯ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್ನಲ್ಲಿ ಬುಧವಾರ ಒಡಿಶಾದ 110 ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>ದೇಶದ ಭವಿಷ್ಯ ಅಡಗಿರುವುದು ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಯಾದಾಗ ಮಾತ್ರ. ಹಾಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಮೊದಲು ಗುಣಮಟ್ಟದ ಬೋಧನಾ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಕಲಿಕಾ ಕೌಶಲವಿರುವ ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗಲು ಸಾಧ್ಯ ಎಂದರು.</p>.<p>ಗುಣಮಟ್ಟದ ಶಿಕ್ಷಣಕ್ಕೆ ಐಐಎಸ್ಸಿ ಪ್ರಖ್ಯಾತಿ ಪಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರಿನಲ್ಲಿ 400 ಎಕರೆ ಭೂಮಿಯನ್ನು ಮತ್ತು ₹50,000ವನ್ನು ಆರಂಭಿಕ ಧನಸಹಾಯವಾಗಿ ನೀಡಿದ್ದರು. ಜೆಮ್ಷೆಡ್ಜಿ ಟಾಟಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶ್ರಮದಿಂದ ಸಂಸ್ಥೆ ಆರಂಭವಾಯಿತು. ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಐಐಎಸ್ಸಿ ಕ್ಯಾಂಪಸ್ಸಿನಲ್ಲಿ ಪಿಎಚ್ಡಿ ಸಂಶೋಧನೆ ಆರಂಭಕ್ಕೆ ಸಿದ್ಧತೆಗಳನ್ನು ನಡೆಯುತ್ತಿದೆ ಎಂದರು.</p>.<p>ಅಂಡಮಾನ್, ನಿಕೋಬರ್ ದ್ವೀಪಗಳು ಸೇರಿದಂತೆ ದೇಶದ ಎಲ್ಲೆಡೆಯ ಸುಮಾರು 25 ಸಾವಿರ ಶಿಕ್ಷಕರು ಇಲ್ಲಿ ತರಬೇತಿ ಪಡೆದಿದ್ದಾರೆ. ಬೆಳಗ್ಗೆ 7ಗಂಟೆಯಿಂದ ಸಂಜೆ 7 ಗಂಟೆಯವರೆಗೆ 11 ದಿನ ನಿರಂತರವಾಗಿ ತರಬೇತಿ ನೀಡಲಾಗುವುದು. ಸಂಸ್ಥೆಯ ನುರಿತ ಸಿಬ್ಬಂದಿ ಶಿಕ್ಷಕರ ಕಲಿಕೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.</p>.<p>ಪ್ರೌಢಶಾಲೆ ಶಿಕ್ಷಕರು ಬೋಧನೆಗೆ ಸೀಮಿತರಾಗದೆ ಸಂಶೋಧನೆಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ತರಗತಿಯಲ್ಲಿ ಮಕ್ಕಳು ಪ್ರಶ್ನಿಸುವ ವಾತಾವರಣವನ್ನು ಸೃಷ್ಟಿಸಬೇಕು ಎಂದು ಡಾ.ಕೆ.ಆರ್.ಪ್ರಭು ಸಲಹೆ ನೀಡಿದರು.</p>.<p>ಡಾ.ಕಿಶೋರ್, ಡಾ.ರಾಘವೇಂದ್ರ, ಡಾ.ಪ್ರಸನ್ನ, ಎಂಜಿನಿಯರ್ ಹೇಮಂತ್ಕುಮಾರ್ ಸೇರಿದಂತೆ ಐಐಎಸ್ಸಿ ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>