<p><strong>ನಾಯಕನಹಟ್ಟಿ: </strong>ರಾತ್ರಿ-ಹಗಲೆನ್ನದೆ ನಿರಂತರವಾಗಿ ರೋಗಿಗಳಿಗೆ ಔಷಧಿ ವಿತರಿಸುವ ಫಾರ್ಮಾಸಿಸ್ಟ್ಗಳ ಸೇವೆ ಅನನ್ಯವಾದದ್ದು ಎಂದು ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಅಫ್ರೋಜ್ಬಾಷಾ ಹೇಳಿದರು.</p>.<p>ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣದ ಔಷಧಿ ಮಳಿಗೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ವೇಳೆ ಮಾತನಾಡಿದರು.</p>.<p>ವೈದ್ಯರಷ್ಟೇ ಮುಖ್ಯ ಪಾತ್ರವನ್ನು ಔಷಧಿತಜ್ಞರು ನಿರ್ವಹಿಸುತ್ತಿದ್ದಾರೆ. ಔಷಧ ಸಂಶೋಧನೆ, ತಯಾರಿಕೆ, ವಿತರಣೆ ಸೇರಿ ಎಲ್ಲ ಹಂತಗಳಲ್ಲೂ ಔಷಧಿ ತಜ್ಞರು ಶ್ರಮಿಸುತ್ತಿದ್ದಾರೆ ಎಂದರು.</p>.<p>2009ರಲ್ಲಿ ಅಂತರರಾಷ್ಟ್ರೀಯ ಫಾರ್ಮಾಸುಟಿಕಲ್ ಫೆಡರೇಷನ್ನ ಸೂಚನೆಯಂತೆ ಪ್ರತಿ ಸೆ.25ರಂದು ವಿಶ್ವ ಫಾರ್ಮಾಸಿಸ್ಟ್ ದಿನ ಆಚರಿಸಲಾಗುತ್ತಿದೆ ಫಾರ್ಮಾಸಿಸ್ಟ್ ವಾಸೀಂ ಅಹಮ್ಮದ್ ಹೇಳಿದರು.</p>.<p>ಆಡಳಿತ ವೈದ್ಯಾಧಿಕಾರಿ ಡಾ.ಸಚಿನ್, ಡಾ.ಅಶೋಕ್, ಡಾ.ಸುರೇಶ್, ಔಷಧಿ ಮಳಿಗೆ ಒಕ್ಕೂಟದ ನಾಗರಾಜ್, ಬಿ.ಟಿ.ರವಿಕುಮಾರ್, ಜೆ.ಪಿ.ತಿಪ್ಪೇಸ್ವಾಮಿ, ವೀರೇಶ್, ಲಕ್ಷ್ಮಣ್ ಸಿಬ್ಬಂದಿ ಸುಧಾ, ದೇವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕನಹಟ್ಟಿ: </strong>ರಾತ್ರಿ-ಹಗಲೆನ್ನದೆ ನಿರಂತರವಾಗಿ ರೋಗಿಗಳಿಗೆ ಔಷಧಿ ವಿತರಿಸುವ ಫಾರ್ಮಾಸಿಸ್ಟ್ಗಳ ಸೇವೆ ಅನನ್ಯವಾದದ್ದು ಎಂದು ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಅಫ್ರೋಜ್ಬಾಷಾ ಹೇಳಿದರು.</p>.<p>ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣದ ಔಷಧಿ ಮಳಿಗೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ವೇಳೆ ಮಾತನಾಡಿದರು.</p>.<p>ವೈದ್ಯರಷ್ಟೇ ಮುಖ್ಯ ಪಾತ್ರವನ್ನು ಔಷಧಿತಜ್ಞರು ನಿರ್ವಹಿಸುತ್ತಿದ್ದಾರೆ. ಔಷಧ ಸಂಶೋಧನೆ, ತಯಾರಿಕೆ, ವಿತರಣೆ ಸೇರಿ ಎಲ್ಲ ಹಂತಗಳಲ್ಲೂ ಔಷಧಿ ತಜ್ಞರು ಶ್ರಮಿಸುತ್ತಿದ್ದಾರೆ ಎಂದರು.</p>.<p>2009ರಲ್ಲಿ ಅಂತರರಾಷ್ಟ್ರೀಯ ಫಾರ್ಮಾಸುಟಿಕಲ್ ಫೆಡರೇಷನ್ನ ಸೂಚನೆಯಂತೆ ಪ್ರತಿ ಸೆ.25ರಂದು ವಿಶ್ವ ಫಾರ್ಮಾಸಿಸ್ಟ್ ದಿನ ಆಚರಿಸಲಾಗುತ್ತಿದೆ ಫಾರ್ಮಾಸಿಸ್ಟ್ ವಾಸೀಂ ಅಹಮ್ಮದ್ ಹೇಳಿದರು.</p>.<p>ಆಡಳಿತ ವೈದ್ಯಾಧಿಕಾರಿ ಡಾ.ಸಚಿನ್, ಡಾ.ಅಶೋಕ್, ಡಾ.ಸುರೇಶ್, ಔಷಧಿ ಮಳಿಗೆ ಒಕ್ಕೂಟದ ನಾಗರಾಜ್, ಬಿ.ಟಿ.ರವಿಕುಮಾರ್, ಜೆ.ಪಿ.ತಿಪ್ಪೇಸ್ವಾಮಿ, ವೀರೇಶ್, ಲಕ್ಷ್ಮಣ್ ಸಿಬ್ಬಂದಿ ಸುಧಾ, ದೇವರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>