‘2016ರಿಂದ ಈವರೆಗೆ ಮೂರು ಜಿಲ್ಲಾ ಸಾಹಿತ್ಯ ಸಮ್ಮೇಳನ, ಐದು ತಾಲ್ಲೂಕು ಸಮ್ಮೇಳನ ಹಾಗೂ ಮೂರು ಹೋಬಳಿ ಸಮ್ಮೇಳನ ನಡೆಸಲಾಗಿದೆ. ಕನ್ನಡ ಭಾಷೆ, ಸಾಹಿತ್ಯ, ವ್ಯಕ್ತಿತ್ವ ನಿರ್ಮಾಣ, ಕೃಷಿ, ರಾಜಕೀಯ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಸಲಾಗಿದೆ. ಮೂರು ಹೆಚ್ಚುವರಿ ದತ್ತಿ ಕಾರ್ಯಕ್ರಮ ಸೇರಿಸಲಾಗಿದೆ. ಹಲವು ಕೃತಿಗಳನ್ನು ಸಾಹಿತ್ಯ ಪರಿಷತ್ ಹೊರತಂದಿದೆ’ ಎಂದು ಮಾಹಿತಿ ನೀಡಿದರು.