<p>ಸಾಣೇಹಳ್ಳಿ (ಹೊಸದುರ್ಗ): ‘ಇಂದು 12ನೇ ಶತಮಾನದ ಶರಣರು ತೋರಿದ ದಾರಿಯಲ್ಲಿ ನಡೆಯುವಂತಾದರೆ ಮತ್ತೆ ಕಲ್ಯಾಣ ಸಾಕಾರಗೊಳ್ಳಲು ಸಾಧ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಗ್ಲೋಬಲ್ ಫೌಂಡೇಷನ್ ಅಂತರ್ಜಾಲದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ವಿಶ್ವ ಬಸವ ಜಯಂತಿ ಮತ್ತು ಬಸವ ಸೆಂಟರ್ ಆಫ್ ನಾರ್ತ್ ಅಮೆರಿಕ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಬಸವಣ್ಣ ಪೂಜಾರಿಗಳ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಿದರು. ಆದರೆ ಇಂದು ಆಗುತ್ತಿರುವುದೇನು? ಈಗಲೂ ಜನರು ಗುಡಿಯ ಹಂಗಿನಿಂದ ಹೊರಬಂದಿಲ್ಲ. ಬಸವಣ್ಣನವರು ಯಜ್ಞ-ಯಾಗಗಳನ್ನು ಬಲವಾಗಿ ಖಂಡಿಸಿದರು. ಇಂದು ಕೆಲವು ಗೃಹಸ್ಥರಲ್ಲದೆ ರಾಜಕೀಯ, ಧಾರ್ಮಿಕ ಕ್ಷೇತ್ರದ ನೇತಾರರು ತಮ್ಮ ಚಟುವಟಿಕೆಯನ್ನು ಪ್ರಾರಂಭಿಸುವುದೇ ಯಜ್ಞ-ಯಾಗಗಳಿಂದ. ಮಾರ್ಗದರ್ಶಕರೇ ಮಾರ್ಗ<br />ತಪ್ಪಿದಾಗ ಜನಸಾಮಾನ್ಯರ ಗತಿ ಏನು’ ಎಂದು ಪ್ರಶ್ನಿಸಿದರು.</p>.<p>‘ಆದರ್ಶ ವ್ಯಕ್ತಿಗಳ ಕೆಲಸ ಕಾರ್ಯ ಕಂಡು ಖುಷಿಪಡುವವರಿಗಿಂತ ಅವರನ್ನು ನಿಂದಿಸುವವರೇ ಹೆಚ್ಚು ಪ್ರಚಾರದಲ್ಲಿರುತ್ತಾರೆ. ಹಾಗಂತ ಆದರ್ಶ ಜೀವಿಗಳು ಅದರಿಂದ ನೊಂದುಕೊಂಡು ತಮ್ಮ ಬದುಕನ್ನೇನೂ ಬದಲಾಯಿಸಿಕೊಳ್ಳುವುದಿಲ್ಲ’ ಎಂದರು.</p>.<p>ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಅಕ್ಕ ಅನ್ನಪೂರ್ಣ, ಈಶ್ವರ ಮಂಟೂರ್ ಮಾತನಾಡಿದರು.</p>.<p>ವಿಶ್ವದ ವಿವಿಧ ಸಂಘ-ಸಂಸ್ಥೆಗಳು ಸೇರಿ ಕಾರ್ಯಕ್ರಮ ಆಯೋಜಿಸಿದ್ದವು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂದೇಶ ನೀಡಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಚಿವ ಎಂ.ಬಿ. ಪಾಟೀಲ್, ಬಿ.ವೈ. ವಿಜಯೇಂದ್ರ, ಶಿವಾನಂದ ಜಾಮದಾರ್, ಡಿ.ಪಿ. ಪ್ರಕಾಶ್, ಗಂಗಾ ಮಾತಾಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಣೇಹಳ್ಳಿ (ಹೊಸದುರ್ಗ): ‘ಇಂದು 12ನೇ ಶತಮಾನದ ಶರಣರು ತೋರಿದ ದಾರಿಯಲ್ಲಿ ನಡೆಯುವಂತಾದರೆ ಮತ್ತೆ ಕಲ್ಯಾಣ ಸಾಕಾರಗೊಳ್ಳಲು ಸಾಧ್ಯ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.</p>.<p>ಗ್ಲೋಬಲ್ ಫೌಂಡೇಷನ್ ಅಂತರ್ಜಾಲದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ವಿಶ್ವ ಬಸವ ಜಯಂತಿ ಮತ್ತು ಬಸವ ಸೆಂಟರ್ ಆಫ್ ನಾರ್ತ್ ಅಮೆರಿಕ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಬಸವಣ್ಣ ಪೂಜಾರಿಗಳ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಿದರು. ಆದರೆ ಇಂದು ಆಗುತ್ತಿರುವುದೇನು? ಈಗಲೂ ಜನರು ಗುಡಿಯ ಹಂಗಿನಿಂದ ಹೊರಬಂದಿಲ್ಲ. ಬಸವಣ್ಣನವರು ಯಜ್ಞ-ಯಾಗಗಳನ್ನು ಬಲವಾಗಿ ಖಂಡಿಸಿದರು. ಇಂದು ಕೆಲವು ಗೃಹಸ್ಥರಲ್ಲದೆ ರಾಜಕೀಯ, ಧಾರ್ಮಿಕ ಕ್ಷೇತ್ರದ ನೇತಾರರು ತಮ್ಮ ಚಟುವಟಿಕೆಯನ್ನು ಪ್ರಾರಂಭಿಸುವುದೇ ಯಜ್ಞ-ಯಾಗಗಳಿಂದ. ಮಾರ್ಗದರ್ಶಕರೇ ಮಾರ್ಗ<br />ತಪ್ಪಿದಾಗ ಜನಸಾಮಾನ್ಯರ ಗತಿ ಏನು’ ಎಂದು ಪ್ರಶ್ನಿಸಿದರು.</p>.<p>‘ಆದರ್ಶ ವ್ಯಕ್ತಿಗಳ ಕೆಲಸ ಕಾರ್ಯ ಕಂಡು ಖುಷಿಪಡುವವರಿಗಿಂತ ಅವರನ್ನು ನಿಂದಿಸುವವರೇ ಹೆಚ್ಚು ಪ್ರಚಾರದಲ್ಲಿರುತ್ತಾರೆ. ಹಾಗಂತ ಆದರ್ಶ ಜೀವಿಗಳು ಅದರಿಂದ ನೊಂದುಕೊಂಡು ತಮ್ಮ ಬದುಕನ್ನೇನೂ ಬದಲಾಯಿಸಿಕೊಳ್ಳುವುದಿಲ್ಲ’ ಎಂದರು.</p>.<p>ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಅಕ್ಕ ಅನ್ನಪೂರ್ಣ, ಈಶ್ವರ ಮಂಟೂರ್ ಮಾತನಾಡಿದರು.</p>.<p>ವಿಶ್ವದ ವಿವಿಧ ಸಂಘ-ಸಂಸ್ಥೆಗಳು ಸೇರಿ ಕಾರ್ಯಕ್ರಮ ಆಯೋಜಿಸಿದ್ದವು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂದೇಶ ನೀಡಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಚಿವ ಎಂ.ಬಿ. ಪಾಟೀಲ್, ಬಿ.ವೈ. ವಿಜಯೇಂದ್ರ, ಶಿವಾನಂದ ಜಾಮದಾರ್, ಡಿ.ಪಿ. ಪ್ರಕಾಶ್, ಗಂಗಾ ಮಾತಾಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>