<p><strong>ಹಿರಿಯೂರು:</strong> ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೆಂಗು, ಅಡಿಕೆ ತೋಟದ ರೈತರು ಸಂತಸಗೊಂಡಿದ್ದರೆ, 15–20 ದಿನದಲ್ಲಿ ಕೊಯ್ಲು ಮಾಡಬೇಕಿದ್ದ ಈರುಳ್ಳಿ ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ.</p>.<p>ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಹರ್ತಿಕೋಟೆ ಗ್ರಾಮದ ಎಲ್. ರಂಗನಾಥ್ ಅವರ 2 ಎಕರೆ, ರಾಜಣ್ಣ ಅವರ 1.03 ಎಕರೆ, ಜಿ. ಶ್ರೀನಿವಾಸ್ ಅವರ 1 ಎಕರೆ, ತಾಳವಟ್ಟಿ ಗ್ರಾಮದ ಲಕ್ಷ್ಮೀದೇವಿಯವರ 5 ಎಕರೆ ಈರುಳ್ಳಿ ಬೆಳೆ ಮಳೆ ನೀರಿನಲ್ಲಿ ಮುಳುಗಿದ್ದು, ಈರುಳ್ಳಿ ಗೆಡ್ಡೆಗಳು ಕೊಳೆಯುವ ಆತಂಕ ಎದುರಾಗಿದೆ.</p>.<p><strong>ಈಶ್ವರಗೆರೆ 22.4 ಮಿ.ಮೀ:</strong> ಮಂಗಳವಾರ ರಾತ್ರಿ ತಾಲ್ಲೂಕಿನ ಈಶ್ವರಗೆರೆ ಗ್ರಾಮದಲ್ಲಿ 22.4 ಮಿ.ಮೀ, ಸೂಗೂರಿನಲ್ಲಿ 19.1, ಬಬ್ಬೂರಿನಲ್ಲಿ 17.8, ಹಿರಿಯೂರಿನಲ್ಲಿ 14.2 ಹಾಗೂ ಇಕ್ಕನೂರಿನಲ್ಲಿ 9.6 ಮಿ.ಮೀ. ಮಳೆಯಾಗಿದೆ.</p>.<p>ಮಧ್ಯಾಹ್ನದಿಂದಲೇ ವರುಣ ಅಬ್ಬರ: ಬುಧವಾರ ಮಧ್ಯಾಹ್ನ 3 ಗಂಟೆಯಿಂದಲೇ ಬಿರುಸಿನ ಮಳೆ ಆರಂಭವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತೆಂಗು, ಅಡಿಕೆ ತೋಟದ ರೈತರು ಸಂತಸಗೊಂಡಿದ್ದರೆ, 15–20 ದಿನದಲ್ಲಿ ಕೊಯ್ಲು ಮಾಡಬೇಕಿದ್ದ ಈರುಳ್ಳಿ ಬೆಳೆಗಾರರು ಕಂಗಾಲಾಗಿ ಹೋಗಿದ್ದಾರೆ.</p>.<p>ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಹರ್ತಿಕೋಟೆ ಗ್ರಾಮದ ಎಲ್. ರಂಗನಾಥ್ ಅವರ 2 ಎಕರೆ, ರಾಜಣ್ಣ ಅವರ 1.03 ಎಕರೆ, ಜಿ. ಶ್ರೀನಿವಾಸ್ ಅವರ 1 ಎಕರೆ, ತಾಳವಟ್ಟಿ ಗ್ರಾಮದ ಲಕ್ಷ್ಮೀದೇವಿಯವರ 5 ಎಕರೆ ಈರುಳ್ಳಿ ಬೆಳೆ ಮಳೆ ನೀರಿನಲ್ಲಿ ಮುಳುಗಿದ್ದು, ಈರುಳ್ಳಿ ಗೆಡ್ಡೆಗಳು ಕೊಳೆಯುವ ಆತಂಕ ಎದುರಾಗಿದೆ.</p>.<p><strong>ಈಶ್ವರಗೆರೆ 22.4 ಮಿ.ಮೀ:</strong> ಮಂಗಳವಾರ ರಾತ್ರಿ ತಾಲ್ಲೂಕಿನ ಈಶ್ವರಗೆರೆ ಗ್ರಾಮದಲ್ಲಿ 22.4 ಮಿ.ಮೀ, ಸೂಗೂರಿನಲ್ಲಿ 19.1, ಬಬ್ಬೂರಿನಲ್ಲಿ 17.8, ಹಿರಿಯೂರಿನಲ್ಲಿ 14.2 ಹಾಗೂ ಇಕ್ಕನೂರಿನಲ್ಲಿ 9.6 ಮಿ.ಮೀ. ಮಳೆಯಾಗಿದೆ.</p>.<p>ಮಧ್ಯಾಹ್ನದಿಂದಲೇ ವರುಣ ಅಬ್ಬರ: ಬುಧವಾರ ಮಧ್ಯಾಹ್ನ 3 ಗಂಟೆಯಿಂದಲೇ ಬಿರುಸಿನ ಮಳೆ ಆರಂಭವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>