ಮಳೆ ಇಲ್ಲದೆ ಬೆಳೆ ಇಲ್ಲ, ಹೀಗಾಗಿ ಕಾರ್ಮಿಕರಿಗೆ ಕೂಲಿ ಸಿಗದೇ ಜೀವನ ನಡೆಸುವುದೆ ದುಸ್ಥರವಾಗಿದೆ. ಕೆಲವರು ವಲಸೆ ಹೋದರೆ ಮತ್ತೆ ಕೆಲವರು ಊರೂರು ಅಲೆದು ಬೇವಿನ ಮರಗಳ ಕೆಳಗೆ ಬೀಜವನ್ನ ಆರಿಸಿ, ಮಾರಾಟ ಮಾಡಿ ಬಂದ ಹಣದಲ್ಲಿ ತಮ್ಮ ಮಕ್ಕಳ ನೋಟ್ ಪುಸ್ತಕ, ಬಟ್ಟೆ ಮತ್ತಿತರೆ ಅವಶ್ಯಕತೆಗಳನ್ನ ಪೂರೈಸಿಕೊಳ್ಳುವುದರ ಜೊತೆಗೆ ಮೂರೋತ್ತಿನ ಊಟ ಮಾಡಲು ಬೇವಿನ ಬೀಜಗಳೆ ಆಧಾರವಾಗಿವೆ ಎನ್ನುತ್ತಾರೆ ಹುಲಿಕುಂಟೆಯ ಬೋವಿ ಕಾಲೋನಿ ಕೂಲಿ ಕಾರ್ಮಿಕಾರದ ಕಮಲಮ್ಮ, ಹನುಮಕ್ಕ,ಯಲ್ಲಮ್ಮ, ತಿಪ್ಪೇಸ್ವಾಮಿ.