‘ಮೋದಿ ಅಕ್ಷರಶಃ ಸೂತ್ರದ ಗೊಂಬೆ. ಈ ಗೊಂಬೆಯನ್ನು ಕೆಲವರು ಆಡಿಸುತ್ತಿದ್ದಾರೆ. ಅಮಿತ್ ಶಾ, ಅಂಬಾನಿ ಹಾಗೂ ಅದಾನಿಯ ರಕ್ಷಣೆಯಲ್ಲಿ ಮೋದಿ ಬದುಕುತ್ತಿದ್ದಾರೆ. ತ್ರಿವಳಿ ತಲಾಖ್, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಹಿಂಪಡೆದಿದ್ದಕ್ಕೆ ಬೆಂಬಲವಿದೆ. ಆದರೆ, ಮಾನವ ವಿರೋಧಿಯಾಗಿರುವ ಸಿಎಎ ಹಾಗೂ ಎನ್ಆರ್ಸಿಗೆ ಬೆಂಬಲವಿಲ್ಲ. ನೀವು ಕೇಳುವ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ’ ಎಂದರು.