‘ಅಂಬಿಗರ ಚೌಡಯ್ಯ ಸ್ವಾಮಿ ನಿಷ್ಠೆ, ಸ್ವಾಭಿಮಾನ, ಘನತೆ, ಗೌರವಕ್ಕೆ ಪಾತ್ರರಾದವರು. ಸ್ಥಳದಲ್ಲಿಯೇ ಅನ್ಯಾಯ ಖಂಡಿಸಿ, ಕಠೋರ ಹಾಗೂ ನಿಷ್ಠುರವಾದಿ ಎನಿಸಿದ್ದಾರೆ. ಜಂಗಮ ಎಂದರೆ ನಡೆ-ನುಡಿ ಶುದ್ಧವಾಗಿರಬೇಕು. ಡಾಂಭಿಕ ಪೂಜೆಗಿಂತ ಭಕ್ತಿ ಪೂಜೆ ಮುಖ್ಯ. ಪ್ರತಿಯೊಬ್ಬರಿಗೆ ಶಿಕ್ಷಣ ನೀಡಬೇಕು. ದುಂದುವೆಚ್ಚದ ಬದಲು ಶಿಕ್ಷಣಕ್ಕಾಗಿ ಹಣ ವ್ಯಯಿಸಬೇಕು ಎಂಬುದು ಅವರ ವಚನಗಳ ತಾತ್ಪರ್ಯ’ ಎಂದು ಹೇಳಿದರು.