‘ಕಂಪನಿಯೊಂದರಿಂದ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಅಗತ್ಯವಿರುವ ಮಣ್ಣನ್ನು ಅಮೃತ್ ಆಯುರ್ವೇದಿಕ್ ಕಾಲೇಜು ಸಮೀಪದ ಟೀಚರ್ಸ್ ಕಾಲೊನಿ ಹಿಂಬದಿಯ ಗುಡ್ಡ ಹಾಗೂ ಇಂಗಳ್ದಾಳ್ ಲಂಬಾಣಿಹಟ್ಟಿಯಿಂದ ಸಾಗಿಸಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚು ತೂಕದ ಮಣ್ಣನ್ನು ಟ್ರಕ್ಗಳಲ್ಲಿ ತುಂಬಿ ಸಾಗಿಸಲಾಗುತ್ತಿದೆ. ಇದರಿಂದಾಗಿ ಇಂಗಳದಾಳ್ ಮಾರ್ಗದ ರಸ್ತೆ ಬಹುತೇಕ ಹಾಳಾಗಿದೆ’ ಎಂದು ಶಾಸಕರು ಕಿಡಿಕಾರಿದರು.
‘ಇಂಗಳದಾಳ್ ಗ್ರಾಮ, ಲಂಬಾಣಿಹಟ್ಟಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರೇ ವಾಸಿಸುತ್ತಿದ್ದಾರೆ. ಎಂಟತ್ತು ಹಳ್ಳಿಗಳ ಜನರು ಸಂಚರಿಸಲು ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ಇಲ್ಲಿನ ರಸ್ತೆಗಳು ಹಾಳಾದ ಪರಿಣಾಮ ₹ 6 ಕೋಟಿ ಸರ್ಕಾರಕ್ಕೆ ನಷ್ಟವಾಗಿದೆ. ಮಣ್ಣು ಸಾಗಾಟ ಮಾಡಿ ಕಾಮಗಾರಿ ನಡೆಸಲು ನನ್ನ ಅಭ್ಯಂತರವಿಲ್ಲ. ಆದರೆ, ಅಗತ್ಯಕ್ಕಿಂತ ಹೆಚ್ಚು ತೂಕದ ಮಣ್ಣು ಸಾಗಿಸಿ ರಸ್ತೆಗಳನ್ನು ಹಾಳು ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.