‘ವಿಡಂಬನೆ, ಗಾಂಭೀರ್ಯ, ಕಾವ್ಯದ ಸೊಬಗು, ಹಾಸ್ಯದ ಲಾಲಿತ್ಯದಿಂದ ಕೂಡಿರುವ ಶ್ರೀಗಳ ‘ಬಿಸಿಲು ಬೆಳದಿಂಗಳು’ ಅಂಕಣ ನನಗೆ ಅಪಾರ ಸ್ಫೂರ್ತಿ ನೀಡಿದೆ. ಇಂಗ್ಲಿಷ್ ವ್ಯವಹಾರದ ಭಾಷೆ ಮಾತ್ರ. ಆದರೆ ಕನ್ನಡ ಕನಸು ಕಟ್ಟುವ ಭಾವನೆಗಳನ್ನು, ಚಿಂತನೆಗಳನ್ನು, ಆಲೋಚನೆಗಳನ್ನು ಬೆಳೆಸುವ ಭಾಷೆ. ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಜೀವಂತವಾಗಿದೆ. ಬೆಂಗಳೂರನ್ನು ನೋಡಿ ಕನ್ನಡ ಸಾಯುತ್ತಿದೆ’ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿದರು.