<p><strong>ಚಿತ್ರದುರ್ಗ: </strong>ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೈವ, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಯನ್ನು ಗುರುವಾರ ಜಿಲ್ಲೆಯ ವಿವಿಧೆಡೆ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.</p>.<p>ಕೋಟೆ ಆಟೊ ನಿಲ್ದಾಣ ಸಂಘಟನೆಯ ಪದಾಧಿಕಾರಿಗಳು ಕೋಟೆ ಮುಂಭಾಗ ಶಿವಕುಮಾರ ಶ್ರೀ ಸ್ಮರಣೋತ್ಸವ ಆಯೋಜಿಸಿದ್ದರು. ಶ್ರೀಗಳ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು.ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.</p>.<p>ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ರಚನಾತ್ಮಕ ಬದುಕನ್ನು ಶಿವಕುಮಾರ ಸ್ವಾಮೀಜಿ ಸಾಗಿಸಿದ್ದಾರೆ. ಮಠಾಧೀಶರಾಗಿದ್ದರೂ ಸಾತ್ವಿಕತೆ, ಸೌಜನ್ಯ, ಸರಳತೆ ಅವರಲ್ಲಿತ್ತು. ಜತೆಯಲ್ಲಿ ಸೇವಾ ಮನೋಭಾವ ತುಂಬಿತ್ತು. ಈ ಕಾರಣಗಳಿಂದಾಗಿ ಶ್ರೀಗಳದು ಸಾರ್ಥಕ ಮತ್ತು ಧನ್ಯತೆಯ ಬದುಕು’ ಎಂದು ಬಣ್ಣಿಸಿದರು.</p>.<p>‘ಶ್ರೀಗಳ ಅನ್ನ ಮತ್ತು ಜ್ಞಾನ ದಾಸೋಹ ಪ್ರಚಲಿತ. ಜತೆಗೆ ಕಾಯಕ ದಾಸೋಹವನ್ನು ಉಣಬಡಿಸಿದರು. ಸಿದ್ಧಗಂಗಾ ಮಠ ಸೇರಿ ರಾಜ್ಯದ ಪ್ರತಿಷ್ಠಿತ ಮಠಗಳು ಜನರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಿವೆ. ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಟ್ಟಂತಾದರೆ, ಮತ್ತೊಂದೆಡೆ ಬೋಧಕ-ಬೋಧಕೇತರ ವರ್ಗದ ಸಾವಿರಾರು ಸಿಬ್ಬಂದಿಗೆ ಕಾಯಕ ನೀಡಿವೆ. ಮಠಗಳು ಉತ್ತಮ ಸಮಾಜಕ್ಕಾಗಿ ಮಾಡಬೇಕಾದ ಕರ್ತವ್ಯವಿದು’ ಎಂದರು.</p>.<p>ನಗರಸಭೆ ಉಪಾಧ್ಯಕ್ಷೆ ಶ್ವೇತಾ ವೀರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಮುಖಂಡರಾದ ವೆಂಕಟೇಶ್, ತಿಪ್ಪಣ್ಣ ಇದ್ದರು.</p>.<p><span class="quote">ಪಂಚಾಕ್ಷರಿ ಮಂತ್ರ ಜಪ:</span>ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಇಲ್ಲಿನ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ಪಂಚಾಕ್ಷರಿ ಮಂತ್ರ ಜಪಿಸುವ ಮೂಲಕ ಶಿವಕುಮಾರ ಶ್ರೀಗಳ ಸ್ಮರಣೋತ್ಸವ ಆಚರಿಸಲಾಯಿತು.</p>.<p>ಇದೇ ವೇಳೆ ವೀರಶೈವ, ಲಿಂಗಾಯತ ಸೇರಿ ಒಳಪಂಗಡಗಳ ಸಮುದಾಯದ ಪದಾಧಿಕಾರಿಗಳು ಜ.21 ದಾಸೋಹ ದಿನವನ್ನಾಗಿ ಸರ್ಕಾರ ಘೋಷಿಸಬೇಕು. ಈ ಮೂಲಕ ಶ್ರೀಗಳಿಗೆ ಗೌರವ ಸಮರ್ಪಿಸಬೇಕು. ಇದನ್ನು ತ್ವರಿತವಾಗಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು.</p>.<p>ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಿಜಯ, ಮಹಿಳಾ ಅಧ್ಯಕ್ಷೆ ಎಂ.ವಿ.ವೀಣಾ, ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದರ್ಶಿ ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಶಿವಸಿಂಪಿ ಸಮುದಾಯದ ಅಧ್ಯಕ್ಷ ಕೊಟ್ರೇಶ್ ಇದ್ದರು.</p>.<p>ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳಲ್ಲೂ ಸಾವಿರಾರು ಜನರು ಉತ್ತಮ ಸಂದೇಶ ಒಳಗೊಂಡ ಶಿವಕುಮಾರ ಶ್ರೀಗಳ ಭಾವಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸ್ವಾಮೀಜಿ ಅವರನ್ನು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ಅಸಂಖ್ಯಾತ ಭಕ್ತರ ಪಾಲಿನ ನಡೆದಾಡುವ ದೈವ, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಯನ್ನು ಗುರುವಾರ ಜಿಲ್ಲೆಯ ವಿವಿಧೆಡೆ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.</p>.<p>ಕೋಟೆ ಆಟೊ ನಿಲ್ದಾಣ ಸಂಘಟನೆಯ ಪದಾಧಿಕಾರಿಗಳು ಕೋಟೆ ಮುಂಭಾಗ ಶಿವಕುಮಾರ ಶ್ರೀ ಸ್ಮರಣೋತ್ಸವ ಆಯೋಜಿಸಿದ್ದರು. ಶ್ರೀಗಳ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು.ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.</p>.<p>ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ರಚನಾತ್ಮಕ ಬದುಕನ್ನು ಶಿವಕುಮಾರ ಸ್ವಾಮೀಜಿ ಸಾಗಿಸಿದ್ದಾರೆ. ಮಠಾಧೀಶರಾಗಿದ್ದರೂ ಸಾತ್ವಿಕತೆ, ಸೌಜನ್ಯ, ಸರಳತೆ ಅವರಲ್ಲಿತ್ತು. ಜತೆಯಲ್ಲಿ ಸೇವಾ ಮನೋಭಾವ ತುಂಬಿತ್ತು. ಈ ಕಾರಣಗಳಿಂದಾಗಿ ಶ್ರೀಗಳದು ಸಾರ್ಥಕ ಮತ್ತು ಧನ್ಯತೆಯ ಬದುಕು’ ಎಂದು ಬಣ್ಣಿಸಿದರು.</p>.<p>‘ಶ್ರೀಗಳ ಅನ್ನ ಮತ್ತು ಜ್ಞಾನ ದಾಸೋಹ ಪ್ರಚಲಿತ. ಜತೆಗೆ ಕಾಯಕ ದಾಸೋಹವನ್ನು ಉಣಬಡಿಸಿದರು. ಸಿದ್ಧಗಂಗಾ ಮಠ ಸೇರಿ ರಾಜ್ಯದ ಪ್ರತಿಷ್ಠಿತ ಮಠಗಳು ಜನರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಿವೆ. ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಟ್ಟಂತಾದರೆ, ಮತ್ತೊಂದೆಡೆ ಬೋಧಕ-ಬೋಧಕೇತರ ವರ್ಗದ ಸಾವಿರಾರು ಸಿಬ್ಬಂದಿಗೆ ಕಾಯಕ ನೀಡಿವೆ. ಮಠಗಳು ಉತ್ತಮ ಸಮಾಜಕ್ಕಾಗಿ ಮಾಡಬೇಕಾದ ಕರ್ತವ್ಯವಿದು’ ಎಂದರು.</p>.<p>ನಗರಸಭೆ ಉಪಾಧ್ಯಕ್ಷೆ ಶ್ವೇತಾ ವೀರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಮುಖಂಡರಾದ ವೆಂಕಟೇಶ್, ತಿಪ್ಪಣ್ಣ ಇದ್ದರು.</p>.<p><span class="quote">ಪಂಚಾಕ್ಷರಿ ಮಂತ್ರ ಜಪ:</span>ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಇಲ್ಲಿನ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ಪಂಚಾಕ್ಷರಿ ಮಂತ್ರ ಜಪಿಸುವ ಮೂಲಕ ಶಿವಕುಮಾರ ಶ್ರೀಗಳ ಸ್ಮರಣೋತ್ಸವ ಆಚರಿಸಲಾಯಿತು.</p>.<p>ಇದೇ ವೇಳೆ ವೀರಶೈವ, ಲಿಂಗಾಯತ ಸೇರಿ ಒಳಪಂಗಡಗಳ ಸಮುದಾಯದ ಪದಾಧಿಕಾರಿಗಳು ಜ.21 ದಾಸೋಹ ದಿನವನ್ನಾಗಿ ಸರ್ಕಾರ ಘೋಷಿಸಬೇಕು. ಈ ಮೂಲಕ ಶ್ರೀಗಳಿಗೆ ಗೌರವ ಸಮರ್ಪಿಸಬೇಕು. ಇದನ್ನು ತ್ವರಿತವಾಗಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು.</p>.<p>ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ವಿಜಯ, ಮಹಿಳಾ ಅಧ್ಯಕ್ಷೆ ಎಂ.ವಿ.ವೀಣಾ, ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದರ್ಶಿ ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಶಿವಸಿಂಪಿ ಸಮುದಾಯದ ಅಧ್ಯಕ್ಷ ಕೊಟ್ರೇಶ್ ಇದ್ದರು.</p>.<p>ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಗ್ರಾಮ್ ಸೇರಿ ಸಾಮಾಜಿಕ ಜಾಲತಾಣಗಳಲ್ಲೂ ಸಾವಿರಾರು ಜನರು ಉತ್ತಮ ಸಂದೇಶ ಒಳಗೊಂಡ ಶಿವಕುಮಾರ ಶ್ರೀಗಳ ಭಾವಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸ್ವಾಮೀಜಿ ಅವರನ್ನು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>