<p><strong>ಹಿರಿಯೂರು: </strong>‘ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸುವಂತೆ 40 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರೂ ಪ್ರಯೋಜನವಾಗಿಲ್ಲ. ರಾಜಕೀಯ ಬೆಳವಣಿಗೆಗೆ ನಮ್ಮ ಸಮುದಾಯವನ್ನು ಬಳಸಿಕೊಂಡಿರುವ ರಾಜಕಾರಣಿಗಳನ್ನು ನಂಬದೇ ಸಂಘಟಿತ ಹೋರಾಟದ ಮೂಲಕ ಮೀಸಲಾತಿ ಪಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.</p>.<p>ನಗರದಲ್ಲಿ ಭಾನುವಾರ ಎಸ್ಟಿ ಮೀಸಲಾತಿ ಹೋರಾಟದ ಕುರಿತು ಚರ್ಚಿಸಲು ಕರೆದಿದ್ದ ತಾಲ್ಲೂಕು ಮಟ್ಟದ ಕಾಡುಗೊಲ್ಲರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಬುಡಕಟ್ಟು ಹಿನ್ನೆಲೆ ಹೊಂದಿರುವ ಕಾಡುಗೊಲ್ಲರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದಿದ್ದಾರೆ. ಎಸ್ಟಿ ಮೀಸಲಾತಿ ಕೇಳುವುದು ನಮ್ಮ ನ್ಯಾಯಬದ್ಧ ಹಕ್ಕು. ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹೋಗಿ ಹಕ್ಕೊತ್ತಾಯ ಮಂಡಿಸಲು ಎಲ್ಲರೂ ಸಿದ್ಧರಾಗಬೇಕು’ ಎಂದು ಅವರು ಮನವಿ ಮಾಡಿದರು.</p>.<p>‘ನಮ್ಮವರು ಯಾವುದೇ ರಾಜಕೀಯ ಪಕ್ಷದಲ್ಲಿ ಇದ್ದರೂ ಸಮುದಾಯದ ಹಿತಾಸಕ್ತಿಯ ವಿಚಾರ<br />ಬಂದಾಗ ಎಲ್ಲರೂ ಒಂದಾಗಿ ಹೋರಾಡೋಣ. ಗೊಲ್ಲರಹಟ್ಟಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ’ ಎಂದರು.</p>.<p>‘ಸೌಲಭ್ಯ ವಂಚಿತ ಹಟ್ಟಿಗಳನ್ನು ನೋಡಿದಾಕ್ಷಣ ಇದು ಕಾಡುಗೊಲ್ಲರ ಹಟ್ಟಿ ಎಂದು ಯಾರು ಬೇಕಾದರೂ ಹೇಳುತ್ತಾರೆ. ಯರಬಳ್ಳಿಯ ಗೊಲ್ಲರಹಟ್ಟಿ<br />ಯಲ್ಲಿ ರಸ್ತೆಗಳೇ ಕಾಣುವುದಿಲ್ಲ. ಗೊಲ್ಲ ಸಮುದಾಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ’ ಎಂದುಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಹೇಳಿದರು.</p>.<p>ಶೀಘ್ರದಲ್ಲೇ ತುಮಕೂರಿನಲ್ಲಿ ಗೌಡ–ಪೂಜಾರಿಗಳ ರಾಜ್ಯ ಮಟ್ಟದ ಸಮಾವೇಶ, ನಂತರ ಚಿತ್ರದುರ್ಗದಲ್ಲಿ ಎಸ್ಟಿ ಮೀಸಲಾತಿಯ ಬೃಹತ್ ಸಮಾವೇಶ ನಡೆಸಲಾಗುವುದು. ಇದಕ್ಕೆ ಸಮುದಾಯದವರು ಒಗ್ಗೂಡಬೇಕು ಎಂದುಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಮನವಿ ಮಾಡಿದರು.</p>.<p>ಮುಖಂಡರಾದ ಕೆ.ಟಿ. ತಿಪ್ಪೇಸ್ವಾಮಿ, ಗೀತಾ ನಂದಿನಿ ಗೌಡ, ಶ್ರವಣಗೆರೆ ತಿಪ್ಪೇಸ್ವಾಮಿ, ಮೂಡಲಗಿರಿಯಪ್ಪ, ರಾಜ್ ಕುಮಾರ್, ಯತೀಶ್, ಗುಯಿಲಾಳ್ ನಾಗರಾಜಯ್ಯ, ಕೃಷ್ಣ ಪೂಜಾರಿ, ಉಮೇಶ್ ಇದ್ದರು.</p>.<p class="Subhead">ಪದಾಧಿಕಾರಿಗಳ ಆಯ್ಕೆ:</p>.<p>ಕಾಡುಗೊಲ್ಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯಗಳಾಗಿ ಸಿ.ಬಿ. ಪಾಪಣ್ಣ, ಪ್ರಭು ಯಾದವ್, ಹರೀಶ್ ಕುಮಾರ್, ತಾಲ್ಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷರಾಗಿ ಪಿ.ಆರ್. ದಾಸ್, ಗೌರವಾಧ್ಯಕ್ಷರಾಗಿ ಆಲದಮರದ ಹಟ್ಟಿ ರಂಗಯ್ಯ, ಕಾರ್ಯಾಧ್ಯಕ್ಷರಾಗಿ ಬಬ್ಬೂರು ಹೇಮಂತ್ ಅವರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು: </strong>‘ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸುವಂತೆ 40 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರೂ ಪ್ರಯೋಜನವಾಗಿಲ್ಲ. ರಾಜಕೀಯ ಬೆಳವಣಿಗೆಗೆ ನಮ್ಮ ಸಮುದಾಯವನ್ನು ಬಳಸಿಕೊಂಡಿರುವ ರಾಜಕಾರಣಿಗಳನ್ನು ನಂಬದೇ ಸಂಘಟಿತ ಹೋರಾಟದ ಮೂಲಕ ಮೀಸಲಾತಿ ಪಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.</p>.<p>ನಗರದಲ್ಲಿ ಭಾನುವಾರ ಎಸ್ಟಿ ಮೀಸಲಾತಿ ಹೋರಾಟದ ಕುರಿತು ಚರ್ಚಿಸಲು ಕರೆದಿದ್ದ ತಾಲ್ಲೂಕು ಮಟ್ಟದ ಕಾಡುಗೊಲ್ಲರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಬುಡಕಟ್ಟು ಹಿನ್ನೆಲೆ ಹೊಂದಿರುವ ಕಾಡುಗೊಲ್ಲರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದಿದ್ದಾರೆ. ಎಸ್ಟಿ ಮೀಸಲಾತಿ ಕೇಳುವುದು ನಮ್ಮ ನ್ಯಾಯಬದ್ಧ ಹಕ್ಕು. ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹೋಗಿ ಹಕ್ಕೊತ್ತಾಯ ಮಂಡಿಸಲು ಎಲ್ಲರೂ ಸಿದ್ಧರಾಗಬೇಕು’ ಎಂದು ಅವರು ಮನವಿ ಮಾಡಿದರು.</p>.<p>‘ನಮ್ಮವರು ಯಾವುದೇ ರಾಜಕೀಯ ಪಕ್ಷದಲ್ಲಿ ಇದ್ದರೂ ಸಮುದಾಯದ ಹಿತಾಸಕ್ತಿಯ ವಿಚಾರ<br />ಬಂದಾಗ ಎಲ್ಲರೂ ಒಂದಾಗಿ ಹೋರಾಡೋಣ. ಗೊಲ್ಲರಹಟ್ಟಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ’ ಎಂದರು.</p>.<p>‘ಸೌಲಭ್ಯ ವಂಚಿತ ಹಟ್ಟಿಗಳನ್ನು ನೋಡಿದಾಕ್ಷಣ ಇದು ಕಾಡುಗೊಲ್ಲರ ಹಟ್ಟಿ ಎಂದು ಯಾರು ಬೇಕಾದರೂ ಹೇಳುತ್ತಾರೆ. ಯರಬಳ್ಳಿಯ ಗೊಲ್ಲರಹಟ್ಟಿ<br />ಯಲ್ಲಿ ರಸ್ತೆಗಳೇ ಕಾಣುವುದಿಲ್ಲ. ಗೊಲ್ಲ ಸಮುದಾಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ’ ಎಂದುಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಹೇಳಿದರು.</p>.<p>ಶೀಘ್ರದಲ್ಲೇ ತುಮಕೂರಿನಲ್ಲಿ ಗೌಡ–ಪೂಜಾರಿಗಳ ರಾಜ್ಯ ಮಟ್ಟದ ಸಮಾವೇಶ, ನಂತರ ಚಿತ್ರದುರ್ಗದಲ್ಲಿ ಎಸ್ಟಿ ಮೀಸಲಾತಿಯ ಬೃಹತ್ ಸಮಾವೇಶ ನಡೆಸಲಾಗುವುದು. ಇದಕ್ಕೆ ಸಮುದಾಯದವರು ಒಗ್ಗೂಡಬೇಕು ಎಂದುಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಮನವಿ ಮಾಡಿದರು.</p>.<p>ಮುಖಂಡರಾದ ಕೆ.ಟಿ. ತಿಪ್ಪೇಸ್ವಾಮಿ, ಗೀತಾ ನಂದಿನಿ ಗೌಡ, ಶ್ರವಣಗೆರೆ ತಿಪ್ಪೇಸ್ವಾಮಿ, ಮೂಡಲಗಿರಿಯಪ್ಪ, ರಾಜ್ ಕುಮಾರ್, ಯತೀಶ್, ಗುಯಿಲಾಳ್ ನಾಗರಾಜಯ್ಯ, ಕೃಷ್ಣ ಪೂಜಾರಿ, ಉಮೇಶ್ ಇದ್ದರು.</p>.<p class="Subhead">ಪದಾಧಿಕಾರಿಗಳ ಆಯ್ಕೆ:</p>.<p>ಕಾಡುಗೊಲ್ಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯಗಳಾಗಿ ಸಿ.ಬಿ. ಪಾಪಣ್ಣ, ಪ್ರಭು ಯಾದವ್, ಹರೀಶ್ ಕುಮಾರ್, ತಾಲ್ಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷರಾಗಿ ಪಿ.ಆರ್. ದಾಸ್, ಗೌರವಾಧ್ಯಕ್ಷರಾಗಿ ಆಲದಮರದ ಹಟ್ಟಿ ರಂಗಯ್ಯ, ಕಾರ್ಯಾಧ್ಯಕ್ಷರಾಗಿ ಬಬ್ಬೂರು ಹೇಮಂತ್ ಅವರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>