ಚಳ್ಳಕೆರೆ: ಸರ್ಕಾರಿ ಸಾರಿಗೆ ಬಸ್ಗಳ ಮೇಲೆ ಹಾಕಲಾಗಿರುವ ಮಾದಕವಸ್ತು ಜಾಹೀರಾತಿನ ಪೋಸ್ಟರ್ ತೆಗೆದುಹಾಕುವಂತೆ ಕನ್ನಡ ರಕ್ಷಣೆ ಮತ್ತು ಗ್ರಾಮೀಣ ಸಾಂಸ್ಕತಿಕ ವೇದಿಕೆ ಆಗ್ರಹಿಸಿದೆ.
ಮಾದಕವಸ್ತು ಜಾಹೀರಾತುಗಳು ಯುವಸಮೂಹ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ತಕ್ಷಣ ಅವುಗಳನ್ನು ತೆಗೆದುಹಾಕಬೇಕು ಎಂದು ವೇದಿಕೆ ಅಧ್ಯಕ್ಷ ಕೊರಲಕುಂಟೆ ತಿಪ್ಪೇಸ್ವಾಮಿ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಆರೋಗ್ಯಕ್ಕೆ ಅಪಾಯಕಾರಿಯಾದ ಮಾದಕವಸ್ತುಗಳ ಜಾಹೀರಾತು ಪೋಸ್ಟರ್ ಬದಲಿಗೆ ನಾಡಿನ ಹೆಸರಾಂತ ಸಾಹಿತಿ, ಬರಹಗಾರರು, ಸಂಸ್ಕತಿ ಚಿಂತಕರು ಹಾಗೂ ಐತಿಹಾಸಿಕ ಪರಂಪರೆ ಬಿಂಬಿಸುವ ಚಿತ್ರಗಳ ಪೋಸ್ಟರ್ಗಳನ್ನು ಅಳವಡಿಸಲು ಕ್ರಮ ಕೈಗೊಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.