<p><strong>ಹಿರಿಯೂರು: </strong>ತಾಲ್ಲೂಕಿನ ಸುಕ್ಷೇತ್ರ ವದ್ದೀಗೆರೆಯ ಸಿದ್ದೇಶ್ವರಸ್ವಾಮಿ (ಕಾಲಭೈರವೇಶ್ವರ ಸ್ವಾಮಿ) ಬ್ರಹ್ಮ ರಥೋತ್ಸವ ಸೋಮವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ಮಧ್ಯಾಹ್ನ ಹೂವಿನ ಪ್ಲಲಕ್ಕಿ ಉತ್ಸವ<strong>,</strong> ಜನಪದ ಕಲಾವಿದರನ್ನು ಒಳಗೊಂಡ ವೈವಿಧ್ಯಮಯ ಮೆರವಣಿಗೆ ನಂತರ ಸಂಜೆ 5.30ಕ್ಕೆ ಬ್ರಹ್ಮರಥೋತ್ಸವ ನಡೆಯಿತು.</p>.<p>‘ಸಿದ್ದಪ್ಪನ (ಸಿದ್ದೇಶ್ವರಸ್ವಾಮಿ) ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸಕಾರರ ಅನಿಸಿಕೆ. ಹಿಂದೆ ಈ ಪ್ರದೇಶದಲ್ಲಿ ವದ್ದಿಮೆಳೆ (ಬಿದಿರುಮೆಳೆ) ಯಥೇಚ್ಛವಾಗಿ ಬೆಳೆಯುತ್ತಿದ್ದ ಕಾರಣ ವದ್ದೀಗೆರೆ ಎಂಬ ಹೆಸರು ಬಂದಿರಬಹುದು, ಸಿದ್ದಪ್ಪ ಈ ಮೆಳೆಗಳಲ್ಲೇ ವಾಸವಾಗಿದ್ದ’ ಎಂದು ಹಿರಿಯರು ಹೇಳುತ್ತಾರೆ.</p>.<p>ಮನೆಗಳಲ್ಲಿ ಚೇಳು ಕಾಣಿಸಿಕೊಂಡವರು ಸಿದ್ದಪ್ಪನಿಗೆ ಹರಕೆ ಹೊತ್ತು, ರಥೋತ್ಸವದ ದಿನ ಹರಕೆ ತೀರಿಸುವುದು ವಾಡಿಕೆ. ಚೇಳು ಕಾಣಿಸಿಕೊಂಡಾಗ ಸಿದ್ದಪ್ಪನನ್ನು ಸ್ಮರಿಸಿದಲ್ಲಿ ಅವು ಕಣ್ಮರೆಯಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ.</p>.<p>ವದ್ದೀಗೆರೆ ಸಿದ್ದೇಶ್ವರ ಸ್ವಾಮಿ ರಥೋತ್ಸವದ ಜಾಗದಲ್ಲಿ ಭೀಮಸಮುದ್ರದ ಗ್ರಾಮಸ್ಥರು 20 ಸಾವಿರ ಮಜ್ಜಿಗೆ ಪಾಕೆಟ್ಗಳನ್ನು ಭಕ್ತರಿಗೆ ಹಂಚಿದರು. ಸೊಂಡೆಕೆರೆ ಗ್ರಾಮದ ಕನಕ ವೃತ್ತದಲ್ಲಿ ಗ್ರಾಮಸ್ಥರು ಜಾತ್ರೆಗೆ ಬರುವ ಭಕ್ತರಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಿದರು.</p>.<p>ರಥೋತ್ಸವದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ಪ್ರವರ್ಗ–1ರ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ಮಾಜಿ ಸಚಿವ ಡಿ. ಸುಧಾಕರ್, ಕಾಂಗ್ರೆಸ್ ಮುಖಂಡ ಮಾಗಡಿ ಜಯರಾಮಯ್ಯ, ತಹಶೀಲ್ದಾರ್ ಶಿವಕುಮಾರ್ ಅವರೂ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು: </strong>ತಾಲ್ಲೂಕಿನ ಸುಕ್ಷೇತ್ರ ವದ್ದೀಗೆರೆಯ ಸಿದ್ದೇಶ್ವರಸ್ವಾಮಿ (ಕಾಲಭೈರವೇಶ್ವರ ಸ್ವಾಮಿ) ಬ್ರಹ್ಮ ರಥೋತ್ಸವ ಸೋಮವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ಮಧ್ಯಾಹ್ನ ಹೂವಿನ ಪ್ಲಲಕ್ಕಿ ಉತ್ಸವ<strong>,</strong> ಜನಪದ ಕಲಾವಿದರನ್ನು ಒಳಗೊಂಡ ವೈವಿಧ್ಯಮಯ ಮೆರವಣಿಗೆ ನಂತರ ಸಂಜೆ 5.30ಕ್ಕೆ ಬ್ರಹ್ಮರಥೋತ್ಸವ ನಡೆಯಿತು.</p>.<p>‘ಸಿದ್ದಪ್ಪನ (ಸಿದ್ದೇಶ್ವರಸ್ವಾಮಿ) ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂಬುದು ಇತಿಹಾಸಕಾರರ ಅನಿಸಿಕೆ. ಹಿಂದೆ ಈ ಪ್ರದೇಶದಲ್ಲಿ ವದ್ದಿಮೆಳೆ (ಬಿದಿರುಮೆಳೆ) ಯಥೇಚ್ಛವಾಗಿ ಬೆಳೆಯುತ್ತಿದ್ದ ಕಾರಣ ವದ್ದೀಗೆರೆ ಎಂಬ ಹೆಸರು ಬಂದಿರಬಹುದು, ಸಿದ್ದಪ್ಪ ಈ ಮೆಳೆಗಳಲ್ಲೇ ವಾಸವಾಗಿದ್ದ’ ಎಂದು ಹಿರಿಯರು ಹೇಳುತ್ತಾರೆ.</p>.<p>ಮನೆಗಳಲ್ಲಿ ಚೇಳು ಕಾಣಿಸಿಕೊಂಡವರು ಸಿದ್ದಪ್ಪನಿಗೆ ಹರಕೆ ಹೊತ್ತು, ರಥೋತ್ಸವದ ದಿನ ಹರಕೆ ತೀರಿಸುವುದು ವಾಡಿಕೆ. ಚೇಳು ಕಾಣಿಸಿಕೊಂಡಾಗ ಸಿದ್ದಪ್ಪನನ್ನು ಸ್ಮರಿಸಿದಲ್ಲಿ ಅವು ಕಣ್ಮರೆಯಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ.</p>.<p>ವದ್ದೀಗೆರೆ ಸಿದ್ದೇಶ್ವರ ಸ್ವಾಮಿ ರಥೋತ್ಸವದ ಜಾಗದಲ್ಲಿ ಭೀಮಸಮುದ್ರದ ಗ್ರಾಮಸ್ಥರು 20 ಸಾವಿರ ಮಜ್ಜಿಗೆ ಪಾಕೆಟ್ಗಳನ್ನು ಭಕ್ತರಿಗೆ ಹಂಚಿದರು. ಸೊಂಡೆಕೆರೆ ಗ್ರಾಮದ ಕನಕ ವೃತ್ತದಲ್ಲಿ ಗ್ರಾಮಸ್ಥರು ಜಾತ್ರೆಗೆ ಬರುವ ಭಕ್ತರಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಿದರು.</p>.<p>ರಥೋತ್ಸವದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ಪ್ರವರ್ಗ–1ರ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್, ಮಾಜಿ ಸಚಿವ ಡಿ. ಸುಧಾಕರ್, ಕಾಂಗ್ರೆಸ್ ಮುಖಂಡ ಮಾಗಡಿ ಜಯರಾಮಯ್ಯ, ತಹಶೀಲ್ದಾರ್ ಶಿವಕುಮಾರ್ ಅವರೂ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>