ಎಷ್ಟು ಹೊತ್ತಾದರೂ ಗೆಳೆಯರ ಸುಳಿವು ಕಾಣದಿದ್ದರಿಂದ ಗಾಬರಿಗೊಂಡ ಸ್ನೇಹಿತರು ನೆನಪಿಗೆ ಬಂದವರಿಗೆಲ್ಲ ದೂರವಾಣಿ ಕರೆ ಮಾಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕ್ರೀಡಾ ಇಲಾಖೆ ಸಿಬ್ಬಂದಿ ಸಹಾಯದಿಂದ ಕಣ್ಮರೆಯಾದ ಯುವಕರ ಪತ್ತೆ ಕಾರ್ಯಕ್ಕೆ ಮುಂದಾದರು. ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮದ ಹಿನ್ನೀರಿನವರೆಗೆ ಹುಡುಕಾಟ ನಡೆಸಿದರೂ ತೆಪ್ಪ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಹೊಸದುರ್ಗದ ಗಡಿಭಾಗದಲ್ಲಿ ಜಲಾಶಯದ ದಂಡೆಯ ಮೇಲೆ ಕುಳಿತಿದ್ದ ಸಂಪತ್, ಯೋಗೇಶ್ ಹಾಗೂ ಧನುಷ್ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿಕರೆತಂದಿದ್ದಾರೆ.