ವೀರಾಂಜನೇಯ ಸ್ವಾಮಿ ಭೋವಿ ಜನಾಂಗದ ಆರಾಧ್ಯ ದೈವವಾಗಿದ್ದು ವೀರಾಂಜನೇಯ, ಗುಡಿಬಂಡಪ್ಪ, ಆಂಜನೇಯ, ರಾಮಂಜನೇಯ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಯಾವುದೇ ಹೊಸ ಕೆಲಸ ಮಾಡುವ ಮುನ್ನ ದೇವರ ಅಪ್ಪಣೆ ಪಡೆದು ಮುಂದುವರಿಯುವುದು ಜಾರಿಯಲ್ಲಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಿಂದಲೂ ಜನರು ಜಾತ್ರೆಗೆ ಬರುತ್ತಾರೆ.