ಹೊಸದುರ್ಗದ ಮಧುರೆ ರಸ್ತೆ ಬದಿ ಜಮೀನಿನಲ್ಲಿ ಹಳದಿ ಬಣ್ಣಕ್ಕೆ ತಿರುಗಿರುವ ಅಡಿಕೆ ಸಸಿಗಳು
ಹೊಸದುರ್ಗದ ಹೇರೂರು ಬಳಿ ರೈತರೊಬ್ಬರು ಅಡಿಕೆ ತೋಟಕ್ಕೆ ಟ್ಯಾಂಕರ್ ನೀರು ಹಾಯಿಸುತ್ತಿರುವುದು
ಕೊಳವೆಬಾವಿ ಇರುವ ರೈತರೇ ತೋಟಗಳನ್ನು ಮಾಡಿದ್ದಾರೆ. ಸ್ವಲ್ಪ ಸಮಯ ಬಿಟ್ಟು ನಂತರ ಮೋಟರ್ ಹಾಕಬೇಕು. ನಿರಂತರವಾಗಿ ನೀರು ಬಿಡಬಾರದು. ರೈತರಿಗೆ ಟ್ಯಾಂಕರ್ ನೀರು ಪೂರೈಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ವೆಂಕಟೇಶ್ ಮೂರ್ತಿ ಹಿರಿಯ ತೋಟಗಾರಿಕೆ ನಿರ್ದೇಶಕ
ಹದ ಮಳೆಯಾಗಿ ಜಮೀನುಗಳು ಹಸಿಯಾದರೆ ತೋಟಗಳಿಗೆ ಚೈತನ್ಯ ಬಂದಂತಾಗುತ್ತದೆ. ನಿರೀಕ್ಷಿತ ಪ್ರಮಾಣದ ಫಸಲು ಪಡೆಯಲು ಇನ್ನೂ ಎರಡು ವರ್ಷ ಬೇಕಾಗುತ್ತದೆ. ಸರ್ಕಾರ ಸಹಾಯಧನ ಕಲ್ಪಿಸಿದರೆ ಅನುಕೂಲವಾಗುತ್ತದೆ.