ಗ್ರಾಮದ ಕುಡಿಯುವ ನೀರಿಗೆಂದು ಕೊಳವೆ ಬಾವಿ ಕೊರೆಸಲಾಗಿತ್ತು. ತದನಂತರ ಊರಿನಲ್ಲಿರುವ ಕೊಳವೆ ಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗಿದ್ದರಿಂದ ಸದರಿ ಕೊಳವೆಬಾವಿಯನ್ನು ಸಿದ್ದಪ್ಪನ ದೇವಸ್ಥಾನಕ್ಕೆ ಬಿಡಲಾಗಿತ್ತು. 150 ಅಡಿ ಆಳವಿರುವ ಬಾವಿಯಲ್ಲಿ ಎರಡು ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ನೀರು ಹೊರಬರುತ್ತಿತ್ತು. ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗ್ರಾಮದ ಹೂಲಿಕೆರೆ ಅರ್ಧ ಭರ್ತಿಯಾಗಿದ್ದು, ಅಂತರ್ಜಲ ವೃದ್ಧಿಸಿದ್ದು, ನೀರು ಬುಗ್ಗೆಯಂತೆ ಚಿಮ್ಮತೊಡಗಿದೆ.