<p><strong>ಯರಬಳ್ಳಿ (ಹಿರಿಯೂರು): </strong>ತಾಲ್ಲೂಕಿನ ಯರಬಳ್ಳಿಯ ಪೂಜಾರ್ ಮಾರಣ್ಣ ಎಂಬುವವರ ಮನೆಯಲ್ಲಿ ಹುತ್ತವೊಂದು ಬೆಳೆಯುತ್ತಿದೆ. ಎರಡು ದಿನಗಳಿಂದ ಈ ಹುತ್ತದಿಂದ ನೀರು ಚಿಮ್ಮುತ್ತಿದ್ದು, ಜನರಲ್ಲಿ ಅಚ್ಚರಿಮೂಡಿಸಿದೆ.</p>.<p>ಗ್ರಾಮದ ಹಂಪಮ್ಮ (ಹುತ್ತದ ಮಾರಮ್ಮ) ದೇವಸ್ಥಾನದ ಪೂಜಾರಿಯಾಗಿರುವ ಮಾರಣ್ಣನ ಮನೆಯಲ್ಲಿನ ಹುತ್ತ ಬೃಹತ್ ಗಾತ್ರಕ್ಕೆ ಬೆಳೆದಿದೆ. ಮಾರಣ್ಣ ಮತ್ತು ಅವರ ಪತ್ನಿ ಪುರದಮ್ಮ ನಿತ್ಯ ಇದಕ್ಕೆ ಪೂಜೆ ಸಲ್ಲಿಸುತ್ತಾರೆ.</p>.<p>ಮನೆಯ ಒಳಗಡೆ ತಳಭಾಗದಿಂದ ನೀರು ಉಕ್ಕುತ್ತಿದೆ. ನೀರು ತುಂಬಿ ಹೊರಗೆ ಹಾಕಿದರೂಖಾಲಿಯಾಗುತ್ತಿಲ್ಲ. ವಿಷಯ ತಿಳಿದ ಜನರು ಗುಂಪು ಗುಂಪಾಗಿ ಬಂದು ನೀರು ಉಕ್ಕುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ ವಾರವೂ ಉತ್ತಮ ಮಳೆಯಾಗಿದ್ದು, ಕೆರೆ, ಹಳ್ಳ, ಚೆಕ್ಡ್ಯಾಂ ತುಂಬಿವೆ. ಅಂತರ್ಜಲ ವೃದ್ಧಿಯಾಗಿರುವುದರಿಂದ ಈ ರೀತಿ ನೀರು ಬರುತ್ತಿರಬಹುದು ಎಂಬ ಅನುಮಾನ ಗ್ರಾಮಸ್ಥರದ್ದು. ತಾಲ್ಲೂಕಿನ ಯಲ್ಲದಕೆರೆ ಗ್ರಾಮದಲ್ಲಿ ಕೊಳವೆಬಾವಿಯಲ್ಲಿ ಈಚೆಗೆ ನೀರು ಚಿಮ್ಮಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಬಳ್ಳಿ (ಹಿರಿಯೂರು): </strong>ತಾಲ್ಲೂಕಿನ ಯರಬಳ್ಳಿಯ ಪೂಜಾರ್ ಮಾರಣ್ಣ ಎಂಬುವವರ ಮನೆಯಲ್ಲಿ ಹುತ್ತವೊಂದು ಬೆಳೆಯುತ್ತಿದೆ. ಎರಡು ದಿನಗಳಿಂದ ಈ ಹುತ್ತದಿಂದ ನೀರು ಚಿಮ್ಮುತ್ತಿದ್ದು, ಜನರಲ್ಲಿ ಅಚ್ಚರಿಮೂಡಿಸಿದೆ.</p>.<p>ಗ್ರಾಮದ ಹಂಪಮ್ಮ (ಹುತ್ತದ ಮಾರಮ್ಮ) ದೇವಸ್ಥಾನದ ಪೂಜಾರಿಯಾಗಿರುವ ಮಾರಣ್ಣನ ಮನೆಯಲ್ಲಿನ ಹುತ್ತ ಬೃಹತ್ ಗಾತ್ರಕ್ಕೆ ಬೆಳೆದಿದೆ. ಮಾರಣ್ಣ ಮತ್ತು ಅವರ ಪತ್ನಿ ಪುರದಮ್ಮ ನಿತ್ಯ ಇದಕ್ಕೆ ಪೂಜೆ ಸಲ್ಲಿಸುತ್ತಾರೆ.</p>.<p>ಮನೆಯ ಒಳಗಡೆ ತಳಭಾಗದಿಂದ ನೀರು ಉಕ್ಕುತ್ತಿದೆ. ನೀರು ತುಂಬಿ ಹೊರಗೆ ಹಾಕಿದರೂಖಾಲಿಯಾಗುತ್ತಿಲ್ಲ. ವಿಷಯ ತಿಳಿದ ಜನರು ಗುಂಪು ಗುಂಪಾಗಿ ಬಂದು ನೀರು ಉಕ್ಕುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ ವಾರವೂ ಉತ್ತಮ ಮಳೆಯಾಗಿದ್ದು, ಕೆರೆ, ಹಳ್ಳ, ಚೆಕ್ಡ್ಯಾಂ ತುಂಬಿವೆ. ಅಂತರ್ಜಲ ವೃದ್ಧಿಯಾಗಿರುವುದರಿಂದ ಈ ರೀತಿ ನೀರು ಬರುತ್ತಿರಬಹುದು ಎಂಬ ಅನುಮಾನ ಗ್ರಾಮಸ್ಥರದ್ದು. ತಾಲ್ಲೂಕಿನ ಯಲ್ಲದಕೆರೆ ಗ್ರಾಮದಲ್ಲಿ ಕೊಳವೆಬಾವಿಯಲ್ಲಿ ಈಚೆಗೆ ನೀರು ಚಿಮ್ಮಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>