<p><strong>ಶಿವಮೊಗ್ಗ</strong>: ನಗರ ಪಾಲಿಕೆ ಆಡಳಿತ ನಿಷ್ಕ್ರಿಯವಾಗಿದೆ. ಪಾಲಿಕೆತೆಗೆದುಕೊಳ್ಳಬೇಕಾದ ನಿರ್ಧಾರಗಳು ಜಿಲ್ಲಾಡಳಿತ ಭವನದಲ್ಲಿ ಇತ್ಯರ್ಥವಾಗುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆಎಂದುಪಾಲಿಕೆ ವಿರೋಧಪಕ್ಷ ಆರೋಪಿಸಿದೆ.</p>.<p>ಬಿಜೆಪಿ ಆಡಳಿತಚುಕ್ಕಾಣಿ ಹಿಡಿದು ವರ್ಷವಾಗಿದೆ. ಆಡಳಿತದಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಪ್ರಗತಿ ಪರಿಶೀಲನಾ ಸಭೆಗಳು, ಚರ್ಚೆಗಳುಜಿಲ್ಲಾಧಿಕಾರಿ ಕಚೇರಿಯಲ್ಲೇ ನಡೆಯುತ್ತಿವೆ. ನೆಪಮಾತ್ರಕ್ಕೆ ಪಾಲಿಕೆ ಇದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿದೂರಿದರು.</p>.<p>ಸರ್ಕಾರದ ಅನುದಾನ ಸಮರ್ಥವಾಗಿ ಬಳಕೆಯಾಗುತ್ತಿಲ್ಲ.ಈಗಅಧಿಕಾರವನ್ನೂಮೊಟಕು ಮಾಡಲಾಗುತ್ತಿದೆ.ಸ್ಮಾರ್ಟ್ಸಿಟಿ ನಿರ್ವಹಣೆಯೂ ವಿಫಲವಾಗಿದೆ.ಇಡೀ ನಗರದಲ್ಲಿಒಂದೇ ಒಂದು ಗುಂಡಿ ಮುಚ್ಚಲುಸಾಧ್ಯವಾಗಿಲ್ಲ.ಕಾಮಗಾರಿಗಳು ಕಳಪೆಯಾಗಿವೆ. ಕಂದಾಯ ವಿಭಾಗ ಸಂಪೂರ್ಣ ವಿಫಲವಾಗಿದೆ. ಖಾತೆ ವರ್ಗಾವಣೆಗೆ 3,500 ಕಡತಗಳುಬಾಕಿ ಇವೆ. ಕಟ್ಟಡ ಪರವಾನಗಿಸಮಸ್ಯೆಗಳೂಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಸುಮಾರು 162 ಟನ್ ಕಸ ಉತ್ಪಾದನೆಯಾಗುತ್ತಿದೆ. 130 ಟನ್ ವಿಲೇವಾರಿಯಾಗುತ್ತಿದೆ.ಪ್ರತಿದಿನ 32 ಟನ್ ಕಸ ನಗರದಲ್ಲೇ ಉಳಿಯುತ್ತಿದೆ. ಕಸ ಸಂಗ್ರಹಣೆ, ಸಾಗಣೆ,ಪರಿಷ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ.ಸ್ವಚ್ಛತಾ ಯೋಜನೆಯ₨22 ಕೋಟಿ ಬಂದಿದೆ. ಈ ಹಣದಲ್ಲಿ ಕಸ ಸಂಗ್ರಹಣೆ ವಾಹನಗಳು, ಮನೆ ಮನೆಗೆನೀಡಲು1.68 ಲಕ್ಷ ಕಸದ ಡಬ್ಬಿಗಳು, ಟಿಪ್ಪರ್ಗಳು,ಮೂರು ಚಕ್ರದ ವಾಹನಗಳು ಸೇರಿಕಸ ವಿಲೇವಾರಿ ಮತ್ತು ಸಂಗ್ರಹಣೆಗೆ ಸಾಕಷ್ಟು ಅವಕಾಶವಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ಬಂದಿದ್ದರೂಸಮರ್ಪಕವಾಗಿ ನಿರ್ವಹಿಸಲು ಆಗಿಲ್ಲ ಎಂದು ದೂರಿದರು.</p>.<p>ಸದಸ್ಯರ ಅನುದಾನದ ಹಣವೂ ಬಳಕೆಯಾಗುತ್ತಿಲ್ಲ. 14ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನವೂ ಸದ್ಬಳಕೆಯಾಗಿಲ್ಲ. ಸ್ಮಾರ್ಟ್ಸಿಟಿಗಾಗಿ 30 ಎಂಜಿನಿಯರ್ಗಳುಕೆಲಸ ಮಾಡುತ್ತಿದ್ದರೂ ರಸ್ತೆಗಳ ಗುಂಡಿ ಮುಚ್ಚಲು ಆಗಿಲ್ಲ.ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಲ್ಲಿ₨125 ಕೋಟಿ ಬಿಡುಗಡೆಯಾಗಿತ್ತು. ನೀರು ಪೂರೈಕೆ, ಒಳಚರಂಡಿ, ಬಾಕ್ಸ್ ಚರಂಡಿ, ರಸ್ತೆ ರಿಪೇರಿ, ವಿದ್ಯುತ್ ಅಳವಡಿಕೆ ಕೆಲಸಗಳು ಕುಂಠಿತವಾಗಿವೆ ಎಂದು ಆರೋಪಿಸಿದರು.</p>.<p>ಪೌರ ಕಾರ್ಮಿಕರಿಗೆ ನವುಲೆ ಬಳಿ ಜಿ+2 ನಿವೇಶನ ನಿರ್ಮಿಸಲುಆಗಿಲ್ಲ. ಪಾಲಿಕೆಯ ಹುದ್ದೆಗಲೂಖಾಲಿ ಇವೆ.438 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 1,163 ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಜಿಲ್ಲೆಯವರೇ ಮುಖ್ಯಮಂತ್ರಿ, ಸಚಿವರೂ ಇದ್ದಾರೆ. ಯಾರಿಗೂ ಪಾಲಿಕೆಬೇಡವಾಗಿದೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೋಹತ್ ಶರೀಫ್, ಮಾಜಿ ಸದಸ್ಯ ಪಂಡಿತ್ ವಿ. ವಿಶ್ವನಾಥ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ನಗರ ಪಾಲಿಕೆ ಆಡಳಿತ ನಿಷ್ಕ್ರಿಯವಾಗಿದೆ. ಪಾಲಿಕೆತೆಗೆದುಕೊಳ್ಳಬೇಕಾದ ನಿರ್ಧಾರಗಳು ಜಿಲ್ಲಾಡಳಿತ ಭವನದಲ್ಲಿ ಇತ್ಯರ್ಥವಾಗುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆಎಂದುಪಾಲಿಕೆ ವಿರೋಧಪಕ್ಷ ಆರೋಪಿಸಿದೆ.</p>.<p>ಬಿಜೆಪಿ ಆಡಳಿತಚುಕ್ಕಾಣಿ ಹಿಡಿದು ವರ್ಷವಾಗಿದೆ. ಆಡಳಿತದಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಪ್ರಗತಿ ಪರಿಶೀಲನಾ ಸಭೆಗಳು, ಚರ್ಚೆಗಳುಜಿಲ್ಲಾಧಿಕಾರಿ ಕಚೇರಿಯಲ್ಲೇ ನಡೆಯುತ್ತಿವೆ. ನೆಪಮಾತ್ರಕ್ಕೆ ಪಾಲಿಕೆ ಇದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿದೂರಿದರು.</p>.<p>ಸರ್ಕಾರದ ಅನುದಾನ ಸಮರ್ಥವಾಗಿ ಬಳಕೆಯಾಗುತ್ತಿಲ್ಲ.ಈಗಅಧಿಕಾರವನ್ನೂಮೊಟಕು ಮಾಡಲಾಗುತ್ತಿದೆ.ಸ್ಮಾರ್ಟ್ಸಿಟಿ ನಿರ್ವಹಣೆಯೂ ವಿಫಲವಾಗಿದೆ.ಇಡೀ ನಗರದಲ್ಲಿಒಂದೇ ಒಂದು ಗುಂಡಿ ಮುಚ್ಚಲುಸಾಧ್ಯವಾಗಿಲ್ಲ.ಕಾಮಗಾರಿಗಳು ಕಳಪೆಯಾಗಿವೆ. ಕಂದಾಯ ವಿಭಾಗ ಸಂಪೂರ್ಣ ವಿಫಲವಾಗಿದೆ. ಖಾತೆ ವರ್ಗಾವಣೆಗೆ 3,500 ಕಡತಗಳುಬಾಕಿ ಇವೆ. ಕಟ್ಟಡ ಪರವಾನಗಿಸಮಸ್ಯೆಗಳೂಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ನಗರದಲ್ಲಿ ಸುಮಾರು 162 ಟನ್ ಕಸ ಉತ್ಪಾದನೆಯಾಗುತ್ತಿದೆ. 130 ಟನ್ ವಿಲೇವಾರಿಯಾಗುತ್ತಿದೆ.ಪ್ರತಿದಿನ 32 ಟನ್ ಕಸ ನಗರದಲ್ಲೇ ಉಳಿಯುತ್ತಿದೆ. ಕಸ ಸಂಗ್ರಹಣೆ, ಸಾಗಣೆ,ಪರಿಷ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ.ಸ್ವಚ್ಛತಾ ಯೋಜನೆಯ₨22 ಕೋಟಿ ಬಂದಿದೆ. ಈ ಹಣದಲ್ಲಿ ಕಸ ಸಂಗ್ರಹಣೆ ವಾಹನಗಳು, ಮನೆ ಮನೆಗೆನೀಡಲು1.68 ಲಕ್ಷ ಕಸದ ಡಬ್ಬಿಗಳು, ಟಿಪ್ಪರ್ಗಳು,ಮೂರು ಚಕ್ರದ ವಾಹನಗಳು ಸೇರಿಕಸ ವಿಲೇವಾರಿ ಮತ್ತು ಸಂಗ್ರಹಣೆಗೆ ಸಾಕಷ್ಟು ಅವಕಾಶವಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಈ ಯೋಜನೆ ಬಂದಿದ್ದರೂಸಮರ್ಪಕವಾಗಿ ನಿರ್ವಹಿಸಲು ಆಗಿಲ್ಲ ಎಂದು ದೂರಿದರು.</p>.<p>ಸದಸ್ಯರ ಅನುದಾನದ ಹಣವೂ ಬಳಕೆಯಾಗುತ್ತಿಲ್ಲ. 14ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನವೂ ಸದ್ಬಳಕೆಯಾಗಿಲ್ಲ. ಸ್ಮಾರ್ಟ್ಸಿಟಿಗಾಗಿ 30 ಎಂಜಿನಿಯರ್ಗಳುಕೆಲಸ ಮಾಡುತ್ತಿದ್ದರೂ ರಸ್ತೆಗಳ ಗುಂಡಿ ಮುಚ್ಚಲು ಆಗಿಲ್ಲ.ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಲ್ಲಿ₨125 ಕೋಟಿ ಬಿಡುಗಡೆಯಾಗಿತ್ತು. ನೀರು ಪೂರೈಕೆ, ಒಳಚರಂಡಿ, ಬಾಕ್ಸ್ ಚರಂಡಿ, ರಸ್ತೆ ರಿಪೇರಿ, ವಿದ್ಯುತ್ ಅಳವಡಿಕೆ ಕೆಲಸಗಳು ಕುಂಠಿತವಾಗಿವೆ ಎಂದು ಆರೋಪಿಸಿದರು.</p>.<p>ಪೌರ ಕಾರ್ಮಿಕರಿಗೆ ನವುಲೆ ಬಳಿ ಜಿ+2 ನಿವೇಶನ ನಿರ್ಮಿಸಲುಆಗಿಲ್ಲ. ಪಾಲಿಕೆಯ ಹುದ್ದೆಗಲೂಖಾಲಿ ಇವೆ.438 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 1,163 ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಜಿಲ್ಲೆಯವರೇ ಮುಖ್ಯಮಂತ್ರಿ, ಸಚಿವರೂ ಇದ್ದಾರೆ. ಯಾರಿಗೂ ಪಾಲಿಕೆಬೇಡವಾಗಿದೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೋಹತ್ ಶರೀಫ್, ಮಾಜಿ ಸದಸ್ಯ ಪಂಡಿತ್ ವಿ. ವಿಶ್ವನಾಥ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>