<p><strong>ಶಿವಮೊಗ್ಗ</strong>: ದೇಶದಲ್ಲಿ ಕೊರೊನಾ ನಿರ್ಬಂಧವಿರುವ ಕಾರಣ ಜನರು ಮನೆಯಲ್ಲೇ ಕುಳಿತು ಸಮಯ ಕಳೆಯಲು ದಿನ ಪತ್ರಿಕೆ, ವಾರಪತ್ರಿಕೆ, ನಿಯತ ಕಾಲಿಕೆಗಳು ಅತ್ಯಗತ್ಯ. ಅದಕ್ಕಾಗಿ ಮುದ್ರಣ ಮಾಧ್ಯಮಗಳ ಪ್ರತಿನಿಧಿಗಳಿಗೆ, ಪತ್ರಿಕಾ ವಿತರಕರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭರವಸೆ ನೀಡಿದರು.</p>.<p>ದೇಶದಲ್ಲಿ ಉಂಟಾಗಿರುವ ಕೊರೊನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ಯಶಸ್ವಿಯಾಗಬೇಕಾದರೆ ಜನರು ತಮ್ಮ ಮನೆಗಳಲ್ಲಿ ಇರುವಂತೆ ಮಾಡಲು ಮಾಧ್ಯಮಗಳ ಸಹಕಾರ ಅಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂಪಾದಕರು, ಪತ್ರಿಕಾ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಜನರು ನಿರಂತರವಾಗಿ ದೃಶ್ಯ ಮಾಧ್ಯಮ ವೀಕ್ಷಿಸಲು ಸಾಧ್ಯವಾಗದು.ಅದಕ್ಕಾಗಿ ಮನೆಗಳಿಗೆ ಹೆಚ್ಚುಪತ್ರಿಕೆಗಳನ್ನು ತರಿಸಿಕೊಳ್ಳಬೇಕು. ಜಗತ್ತಿನ, ಸ್ಥಳೀಯ ಆಗುಹೋಗುಗಳನ್ನು ಮನೆಯಲ್ಲೇ ಕುಳಿತು ಕೂಲಂಕಷವಾಗಿ ಓದಲು ಸಾಧ್ಯವಾಗುತ್ತದೆ. ಸಮಯವೂ ಸಾಗುತ್ತದೆ ಎಂದರು.</p>.<p>ಪ್ರೆಸ್ ಟ್ರಸ್ಟ್ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಪತ್ರಿಕಾ ವಿತರಕರಿಗೆ ಟ್ರಸ್ಟ್ ವತಿಯಿಂದ ಅಗತ್ಯ ಮಾಸ್ಕ್, ಕೈಗವಸುಗಳನ್ನು ವಿತರಿಸುವ ಭರವಸೆ ನೀಡಿದರು.</p>.<p><strong>ಹಲವೆಡೆ ಮಾರ್ಗಗಳೇ ಬಂದ್</strong></p>.<p>ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹೊರಗಿನವರ ಪ್ರವೇಶ ತಡೆಯಲು ರಸ್ತೆ ಮಾರ್ಗಗಳನ್ನೇ ಬಂದ್ ಮಾಡಲಾಗಿದೆ. ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ತ್ಯಾಗರ್ತಿ, ಮೈಲಾರಿಕೊಪ್ಪ, ನಾಡವಳ್ಳಿ, ಚನ್ನಾಪುರ ಮಾರ್ಗದಲ್ಲಿ ಬಿದಿರು, ಮರದ ದಿಮ್ಮಿಗಳನ್ನು ಅಡ್ಡಹಾಕಿ ಸಂಚಾರಕ್ಕೆ ತಡೆಯೊಡ್ಡಲಾಗಿದೆ.</p>.<p>ಪ್ರಕರಣ ದಾಖಲು: ಕೊರೊನಾ ಪೀಡಿತ ದೇಶದಿಂದ ತೀರ್ಥಹಳ್ಳಿ ತಾಲ್ಲೂಕಿಗೆ ಬಂದು ಹೋಂ ಕ್ವಾರಂಟೈನ್ನಲ್ಲಿದ್ದ ಇಬ್ಬರ ವಿರುದ್ಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕಣ್ಗಾವಲು ತಪ್ಪಿಸಿಸಾರ್ವಜನಿಕರ ಜತೆ ಬೆರೆತು ಕ್ರಿಕೆಟ್ ಆಡುತ್ತಿದ್ದ ಆರೋಪದ ಮೇಲೆಮಹಮ್ಮದ್ ಸೊಯಬ್, ಮಹಮದ್ ಹುಸೇನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಕೋಳಿ ಫಾರಂ ಮಾಲೀಕನ ವಿರುದ್ಧ ಪ್ರಕರಣ: ಫಾರಂನಲ್ಲಿ ಹೆಚ್ಚು ಸಂಖ್ಯೆಯ ಕೋಳಿಗಳು ಮೃತಪಟ್ಟರೂ ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ನಿರ್ಲಕ್ಷ್ಯ ತೋರಿದ ಶಿಕಾರಿಪುರ ಅಂಬರಗೊಪ್ಪ ನಿವಾಸಿ ರಂಗಸ್ವಾಮಿ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ದೇಶದಲ್ಲಿ ಕೊರೊನಾ ನಿರ್ಬಂಧವಿರುವ ಕಾರಣ ಜನರು ಮನೆಯಲ್ಲೇ ಕುಳಿತು ಸಮಯ ಕಳೆಯಲು ದಿನ ಪತ್ರಿಕೆ, ವಾರಪತ್ರಿಕೆ, ನಿಯತ ಕಾಲಿಕೆಗಳು ಅತ್ಯಗತ್ಯ. ಅದಕ್ಕಾಗಿ ಮುದ್ರಣ ಮಾಧ್ಯಮಗಳ ಪ್ರತಿನಿಧಿಗಳಿಗೆ, ಪತ್ರಿಕಾ ವಿತರಕರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭರವಸೆ ನೀಡಿದರು.</p>.<p>ದೇಶದಲ್ಲಿ ಉಂಟಾಗಿರುವ ಕೊರೊನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ಯಶಸ್ವಿಯಾಗಬೇಕಾದರೆ ಜನರು ತಮ್ಮ ಮನೆಗಳಲ್ಲಿ ಇರುವಂತೆ ಮಾಡಲು ಮಾಧ್ಯಮಗಳ ಸಹಕಾರ ಅಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ತಿಳಿಸಿದರು.</p>.<p>ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂಪಾದಕರು, ಪತ್ರಿಕಾ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಜನರು ನಿರಂತರವಾಗಿ ದೃಶ್ಯ ಮಾಧ್ಯಮ ವೀಕ್ಷಿಸಲು ಸಾಧ್ಯವಾಗದು.ಅದಕ್ಕಾಗಿ ಮನೆಗಳಿಗೆ ಹೆಚ್ಚುಪತ್ರಿಕೆಗಳನ್ನು ತರಿಸಿಕೊಳ್ಳಬೇಕು. ಜಗತ್ತಿನ, ಸ್ಥಳೀಯ ಆಗುಹೋಗುಗಳನ್ನು ಮನೆಯಲ್ಲೇ ಕುಳಿತು ಕೂಲಂಕಷವಾಗಿ ಓದಲು ಸಾಧ್ಯವಾಗುತ್ತದೆ. ಸಮಯವೂ ಸಾಗುತ್ತದೆ ಎಂದರು.</p>.<p>ಪ್ರೆಸ್ ಟ್ರಸ್ಟ್ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಪತ್ರಿಕಾ ವಿತರಕರಿಗೆ ಟ್ರಸ್ಟ್ ವತಿಯಿಂದ ಅಗತ್ಯ ಮಾಸ್ಕ್, ಕೈಗವಸುಗಳನ್ನು ವಿತರಿಸುವ ಭರವಸೆ ನೀಡಿದರು.</p>.<p><strong>ಹಲವೆಡೆ ಮಾರ್ಗಗಳೇ ಬಂದ್</strong></p>.<p>ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹೊರಗಿನವರ ಪ್ರವೇಶ ತಡೆಯಲು ರಸ್ತೆ ಮಾರ್ಗಗಳನ್ನೇ ಬಂದ್ ಮಾಡಲಾಗಿದೆ. ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ತ್ಯಾಗರ್ತಿ, ಮೈಲಾರಿಕೊಪ್ಪ, ನಾಡವಳ್ಳಿ, ಚನ್ನಾಪುರ ಮಾರ್ಗದಲ್ಲಿ ಬಿದಿರು, ಮರದ ದಿಮ್ಮಿಗಳನ್ನು ಅಡ್ಡಹಾಕಿ ಸಂಚಾರಕ್ಕೆ ತಡೆಯೊಡ್ಡಲಾಗಿದೆ.</p>.<p>ಪ್ರಕರಣ ದಾಖಲು: ಕೊರೊನಾ ಪೀಡಿತ ದೇಶದಿಂದ ತೀರ್ಥಹಳ್ಳಿ ತಾಲ್ಲೂಕಿಗೆ ಬಂದು ಹೋಂ ಕ್ವಾರಂಟೈನ್ನಲ್ಲಿದ್ದ ಇಬ್ಬರ ವಿರುದ್ಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕಣ್ಗಾವಲು ತಪ್ಪಿಸಿಸಾರ್ವಜನಿಕರ ಜತೆ ಬೆರೆತು ಕ್ರಿಕೆಟ್ ಆಡುತ್ತಿದ್ದ ಆರೋಪದ ಮೇಲೆಮಹಮ್ಮದ್ ಸೊಯಬ್, ಮಹಮದ್ ಹುಸೇನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಕೋಳಿ ಫಾರಂ ಮಾಲೀಕನ ವಿರುದ್ಧ ಪ್ರಕರಣ: ಫಾರಂನಲ್ಲಿ ಹೆಚ್ಚು ಸಂಖ್ಯೆಯ ಕೋಳಿಗಳು ಮೃತಪಟ್ಟರೂ ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ನಿರ್ಲಕ್ಷ್ಯ ತೋರಿದ ಶಿಕಾರಿಪುರ ಅಂಬರಗೊಪ್ಪ ನಿವಾಸಿ ರಂಗಸ್ವಾಮಿ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>