<p><strong>ಬಂಟ್ವಾಳ: </strong>ಇಲ್ಲಿನ ಬಿ.ಸಿ.ರೋಡು ಸಮೀಪದ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ₹ 20 ಲಕ್ಷ ಮೌಲ್ಯದ 40 ಕೆ.ಜಿ ಗಾಂಜಾ ಹಾಗೂ ಆರೋಪಿಅಹಮ್ಮದ್ ಸಾಬಿತ್ ಎಂಬ ಯುವಕನನ್ನು ಮಂಗಳವಾರ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಗೌಡ ನೇತೖತ್ವದ ಪೊಲೀಸ್ ತಂಡವು ದಾಳಿ ಮಾಡಿ ಬಂಧಿಸಿದೆ.</p>.<p>ಇದೇ ವೇಳೆ ಮನೆಯಲ್ಲಿದ್ದ ಈತನ ಸಂಬಂಧಿ ಮಹಮ್ಮದ್ ಅನ್ಸಾರ್ ಪರಾರಿಯಾಗಿದ್ದಾನೆ.</p>.<p>ಆಂಧ್ರಪ್ರದೇಶ, ವಿಶಾಖಪಣ್ಣಂ ಮತ್ತಿತರ ಕಡೆಗಳಿಗೆ ಮೀನು ಸಾಗಣೆ ಮಾಡುತ್ತಿದ್ದು, ಮರಳಿ ಬರುವಾಗ ಮಾರಾಟ ಮಾಡಲು ಗಾಂಜಾ ತರುತ್ತಿದ್ದೆವು ಎಂದು ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.</p>.<p>ಮನೆಯಲ್ಲಿ ಎರಡು ಬಿಳಿ ಬಣ್ಣದ ಪಾಲಿಥಿನ್ ಚೀಲಗಳಲ್ಲಿ ಖಾಕಿ ಬಣ್ಣದ ಪ್ಲಾಸ್ಟಿಕ್ನಲ್ಲಿ 10 ಕಟ್ಟುಗಳಲ್ಲಿ ಮಾದಕ ಗಾಂಜಾ ಗಿಡದ ಮೊಗ್ಗು, ಎಲೆ, ಕಡ್ಡಿ ಪತ್ತೆಯಾಗಿವೆ.</p>.<p>ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಪಿಎಸ್ಐ ಅವಿನಾಶ್ ಗೌಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಟ್ವಾಳ: </strong>ಇಲ್ಲಿನ ಬಿ.ಸಿ.ರೋಡು ಸಮೀಪದ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ₹ 20 ಲಕ್ಷ ಮೌಲ್ಯದ 40 ಕೆ.ಜಿ ಗಾಂಜಾ ಹಾಗೂ ಆರೋಪಿಅಹಮ್ಮದ್ ಸಾಬಿತ್ ಎಂಬ ಯುವಕನನ್ನು ಮಂಗಳವಾರ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಗೌಡ ನೇತೖತ್ವದ ಪೊಲೀಸ್ ತಂಡವು ದಾಳಿ ಮಾಡಿ ಬಂಧಿಸಿದೆ.</p>.<p>ಇದೇ ವೇಳೆ ಮನೆಯಲ್ಲಿದ್ದ ಈತನ ಸಂಬಂಧಿ ಮಹಮ್ಮದ್ ಅನ್ಸಾರ್ ಪರಾರಿಯಾಗಿದ್ದಾನೆ.</p>.<p>ಆಂಧ್ರಪ್ರದೇಶ, ವಿಶಾಖಪಣ್ಣಂ ಮತ್ತಿತರ ಕಡೆಗಳಿಗೆ ಮೀನು ಸಾಗಣೆ ಮಾಡುತ್ತಿದ್ದು, ಮರಳಿ ಬರುವಾಗ ಮಾರಾಟ ಮಾಡಲು ಗಾಂಜಾ ತರುತ್ತಿದ್ದೆವು ಎಂದು ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.</p>.<p>ಮನೆಯಲ್ಲಿ ಎರಡು ಬಿಳಿ ಬಣ್ಣದ ಪಾಲಿಥಿನ್ ಚೀಲಗಳಲ್ಲಿ ಖಾಕಿ ಬಣ್ಣದ ಪ್ಲಾಸ್ಟಿಕ್ನಲ್ಲಿ 10 ಕಟ್ಟುಗಳಲ್ಲಿ ಮಾದಕ ಗಾಂಜಾ ಗಿಡದ ಮೊಗ್ಗು, ಎಲೆ, ಕಡ್ಡಿ ಪತ್ತೆಯಾಗಿವೆ.</p>.<p>ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಪಿಎಸ್ಐ ಅವಿನಾಶ್ ಗೌಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>