ಸಿ.ಪಿ.ಸಿ.ಆರ್.ಐ.ಯ ನಿರ್ದೇಶಕಿ ಡಾ.ಅನಿತಾ ಕರುನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮತ್ತು ಸಂಸ್ಥೆಯ ಸಿಬ್ಬಂದಿಯನ್ನು ಗೌರವಿಸಲಾಯಿತು. ನಿವೃತ್ತ ವಿಜ್ಞಾನಿ ಡಾ.ಯುದುಕುಮಾರ್, ನಿವೃತ್ತ ಅಧಿಕಾರಿ ಮಂಜುನಾಥ್ ಶೆಟ್ಟಿ, ಸಹಾಯಕ ಆಡಳಿತಾಧಿಕಾರಿ ಟಿ.ಎಚ್. ನಾಗರಾಜ್ ಮಾತನಾಡಿದರು. ಡಾ.ನಿರಳ್ ಕೃಷಿ ಮೇಳದ 5 ದಿನದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಮನಮೋಹನ್ ಭಟ್ ಸ್ವಾಗತಿಸಿದರು. ನಾರಾಯಣ ನಾಯ್ಕ ವಂದಿಸಿದರು. ಡಾ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.