‘ಮಹಿಳಾ ಕೇಂದ್ರಿತ ರಾಜಕಾರಣ, ಲಿಂಗ ಸಂವೇದಿ ಬಜೆಟ್, ಮಹಿಳೆಯರಲ್ಲಿ ಉದ್ಯಮಶೀಲತೆ, ಕೌಶಲ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ರಾಜಾರಾಮ ಮೋಹನ್ರಾಯ್ ಕೊಡುಗೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಮಹಿಳೆಯರ ಭಾಗವಹಿಸುವಿಕೆ, ಗುಣಮಟ್ಟದ ಬದುಕು– ಮಹಿಳಾಸಬಲೀಕರಣ ಮೊದಲಾದ ವಿಚಾರಗಳ ಬಗ್ಗೆ ತಜ್ಞರು ವಿಚಾರ ಮಂಡಿಸುವರು. ಇದೇ 31ರಂದು ಸಂಜೆ 3.30ಕ್ಕೆ ಸಮಾರೋಪ ನಡೆಯಲಿದ್ದು, ನೀತಿ ಆಯೋಗದ ಉಪಸಲಹೆಗಾರ ಡಾ.ಆರ್.ವಿ.ಪಿ. ಸಿಂಗ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಲಿದ್ದಾರೆ’ ಎಂದರು.