ರೈತರ ಸಂಕಷ್ಟ ಪರಿಹಾರಕ್ಕಾಗಿ ತಿಂಗಳಿಗೆ ಒಂದು ಕ್ವಿಂಟಲ್ ಅಡಿಕೆ ಅಥವಾ ₹25 ಸಾವಿರ ಮೌಲ್ಯದ ಅಡಿಕೆ ಖರೀದಿಗೆ ಅಡ್ಯನಡ್ಕ, ಪುತ್ತೂರು, ಆಲಂಕಾರು, ವಿಟ್ಲ, ಸುಳ್ಯ, ನಿಂತಿಕಲ್ಲು, ಕಡಬ, ಉಪ್ಪಿನಂಗಡಿ ಮತ್ತು ಬೆಳ್ತಂಗಡಿಯಲ್ಲಿ ಖರೀದಿ ಕೇಂದ್ರಗಳನ್ನು ಈ ಹಿಂದೆ ಆರಂಭಿಸಲಾಗಿತ್ತು. ನಂತರ ಎರಡು ಕ್ವಿಂಟಲ್ ಅಡಿಕೆ ಅಥವಾ ₹50 ಸಾವಿರ ಮೌಲ್ಯದ ಅಡಿಕೆ ಖರೀದಿ ನಡೆಸಲು ಕ್ಯಾಂಪ್ಕೊ ತೀರ್ಮಾನಿಸಿತ್ತು. ಅಲ್ಲದೇ ಅಡಿಕೆ ಧಾರಣೆಯನ್ನು ₹250 ರಿಂದ ₹255 ಕ್ಕೆ ಹೆಚ್ಚಿಸಲಾಗಿತ್ತು.