ಎಲ್ಲರಲ್ಲೂ ರಾಮನ ಸದ್ಗುಣಗಳನ್ನು ತುಂಬುವುದು, ಮಾತೃಭೂಮಿಯ ಮೇಲೆ ಪ್ರೀತಿ ಮೂಡಿಸುವುದುರಾಮರಾಜ್ಯದ ಪ್ರಮುಖ ಅಂಶಗಳು. ರಾಮರಾಜ್ಯ ನಿರ್ಮಾಣಕ್ಕೆ ಪಕ್ಷದ ಹಂಗು ಇಲ್ಲ. ಅದು ಪಕ್ಷಾತೀತವಾಗಿ ನಡೆಯುವ ಕಾರ್ಯ. ಉತ್ತಮ ಕಾರ್ಯಗಳನ್ನು ಮಾಡುವವರೆಲ್ಲರೂ ರಾಮರಾಜ್ಯದ ಭಾಗವಾಗಲಿದ್ದಾರೆ’ ಎಂದು ಹೇಳಿದ ಅವರು ‘ನಾಗರಿಕ ಸಮಾಜದಲ್ಲಿ ಕೆಲವೇ ಕೆಲವರು ಅನಾರಿಕರಂತೆ ವರ್ತಿಸಿ ಸಮಾಜದ ಸ್ವಾಸ್ಥ್ಯ ಕೆಡವುತ್ತಾರೆ. ಅಂಥವರನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರಗಳು ಮುಲಾಜಿಲ್ಲದೆ ಮಾಡಬೇಕು’ ಎಂದು ಸಲಹೆ ನೀಡಿದರು.