ಮಂಗಳ ಕ್ರೀಡಾಂಗಣದಿಂದ ಲೇಡಿಹಿಲ್, ಪಿ.ವಿ.ಎಸ್, ಜ್ಯೋತಿ, ಬೆಂದೂರವಲ್, ಕಂಕನಾಡಿ, ಮಾರ್ಗನ್ಸ್ ಗೇಟ್, ಮಂಗಳಾದೇವಿ ಸರ್ಕಲ್,ಮಂಗಳಾದೇವಿ ದೇವಸ್ಥಾನ, ಸಿಟಿ ಸೆಂಟರ್, ನವ ಭಾರತ್ ಸರ್ಕಲ್, ಲಾಲ್ಬಾಗ್ ಮಾರ್ಗವಾಗಿ ಸಂಚರಿಸುವ ಜಾಥಾ ಪುನಃ ಮಂಗಳ ಕ್ರೀಡಾಂಗಣವನ್ನುತಲುಪಲಿದೆ ಎಂದರು. ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷೆ ಸುಮಿತ್ರಾ ವಿ. ಶೆಟ್ಟಿ, ವಿನಯ ಕೃಷಿ ಬೆಳೆಗಾರರ ಸಂಘದ ನಿರ್ದೇಶಕ ಡಾ.ಅಣ್ಣಯ್ಯ ಕುಲಾಲ್, ಜ್ಯೂಯಿಸ್ ಫಿಟ್ನೆಸ್ ಕ್ಲಬ್ನ ಕದ್ರಿ ರಾಜೇಶ್, ಮಂಗಳೂರು ಸೈಕ್ಲಿಂಗ್ ಕ್ಲಬ್ನ ಅನಿಲ್ ಶೇಟ್ ಉಪಸ್ಥಿತರಿದ್ದರು.