<p><strong>ಮಂಗಳೂರು:</strong> ‘ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೂಲಕ ಸರ್ಕಾರ 2022ರಿಂದ ಪುಸ್ತಕಗಳ ಸಗಟು ಖರೀದಿ ನಡೆಸುತ್ತಿಲ್ಲ. ಸಗಟು ಖರೀದಿ ಆಯಾ ವರ್ಷವೇ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿ’ ಎಂದು ಎಂದು ವಿದ್ವಾಂಸರಾದ ಪ್ರೊ.ಬಿ.ಎ ವಿವೇಕ ರೈ ಹೇಳಿದರು.</p>.<p>ಇಲ್ಲಿನ ಸಪ್ನ ಬುಕ್ ಹೌಸ್ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಕಟಿಸಿದ 70 ಕನ್ನಡ ಪುಸ್ತಕಗಳನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>‘ಪುಸ್ತಕಗಳ ಸಗಟು ಖರೀದಿ ಸ್ಥಗಿತಗೊಂಡರೆ ಲೇಖಕರು, ಪ್ರಕಾಶಕರು ಪ್ರಕಟಣೆಯನ್ನೇ ನಿಲ್ಲಿಸುತ್ತಾರೆ. ಹೊಸಪುಸ್ತಕಗಳಿಲ್ಲದೇ ಸಾರ್ವಜನಿಕ ಗ್ರಂಥಾಲಯಗಳು ಪಳೆಯುಳಿಕೆಯಂತಾಗುತ್ತ. ಇಂತಹ ಗ್ರಂಥಾಲಯಗಳನ್ನು ಹೆಚ್ಚಾಗಿ ಬಳಸುವ ಮಹಿಳೆಯರಲ್ಲಿ, ಮಕ್ಕಳಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತದೆ’ ಎಂದರು.</p>.<p>‘ಜಗತ್ತಿನ ಜ್ಞಾನ ಕನ್ನಡದ ಮೂಲಕ ಬರಬೇಕು. ಡಿಜಿಟಲ್ ವೇದಿಕೆಗಳಿಂದ ಮಾಹಿತಿ ಸಿಗಬಹುದು ಆದರೆ ಮನಸಿನ ಸಾಂತ್ವನಕ್ಕೆ ಪುಸ್ತಕದ ಓದು ಬೇಕು. ಪುಸ್ತಕಗಳಿಂದ ಬಹುರೂಪಿ ಜ್ಞಾನ, ಆಳವಾದ ಚಿಂತನೆ ಲಭಿಸುತ್ತದೆ’ ಎಂದು ಹೇಳಿದರು.</p>.<p>ನಿವೃತ್ತ ಪ್ರಾಧ್ಯಾಪಕ ಆರ್.ನರಸಿಂಹಮೂರ್ತಿ, ‘ಹೊಸ ಓದುಗರನ್ನು ಆಕರ್ಷಿಸುವ, ಓದಿನ ಆಸಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ’ ಎಂದರು.</p><p><br>ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಧನಂಜಯ ಕುಂಬ್ಳೆ, ‘ಪುಸ್ತಕ ಹೊಸ ವಿಷಯ ಪರಿಚಯಿಸುವ, ಹೊಸ ಲೋಕ ತೋರಿಸುವ ಆತ್ಮ ಸಂಗಾತಿ’ ಎಂದರು.</p><p><br>ನಗರದ ಸಪ್ನ ಬುಕ್ ಹೌಸ್ ಶಾಖಾ ವ್ಯವಸ್ಥಾಪಕ ಪ್ರೀತೇಶ್, ಹಂಪನಕಟ್ಟ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ, ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್, ಸುರತ್ಕಲ್ನ ಪ್ರೊ.ಕೃಷ್ಣಮೂರ್ತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ‘ಸಾರ್ವಜನಿಕ ಗ್ರಂಥಾಲಯ ಇಲಾಖೆ ಮೂಲಕ ಸರ್ಕಾರ 2022ರಿಂದ ಪುಸ್ತಕಗಳ ಸಗಟು ಖರೀದಿ ನಡೆಸುತ್ತಿಲ್ಲ. ಸಗಟು ಖರೀದಿ ಆಯಾ ವರ್ಷವೇ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿ’ ಎಂದು ಎಂದು ವಿದ್ವಾಂಸರಾದ ಪ್ರೊ.ಬಿ.ಎ ವಿವೇಕ ರೈ ಹೇಳಿದರು.</p>.<p>ಇಲ್ಲಿನ ಸಪ್ನ ಬುಕ್ ಹೌಸ್ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಕಟಿಸಿದ 70 ಕನ್ನಡ ಪುಸ್ತಕಗಳನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>‘ಪುಸ್ತಕಗಳ ಸಗಟು ಖರೀದಿ ಸ್ಥಗಿತಗೊಂಡರೆ ಲೇಖಕರು, ಪ್ರಕಾಶಕರು ಪ್ರಕಟಣೆಯನ್ನೇ ನಿಲ್ಲಿಸುತ್ತಾರೆ. ಹೊಸಪುಸ್ತಕಗಳಿಲ್ಲದೇ ಸಾರ್ವಜನಿಕ ಗ್ರಂಥಾಲಯಗಳು ಪಳೆಯುಳಿಕೆಯಂತಾಗುತ್ತ. ಇಂತಹ ಗ್ರಂಥಾಲಯಗಳನ್ನು ಹೆಚ್ಚಾಗಿ ಬಳಸುವ ಮಹಿಳೆಯರಲ್ಲಿ, ಮಕ್ಕಳಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತದೆ’ ಎಂದರು.</p>.<p>‘ಜಗತ್ತಿನ ಜ್ಞಾನ ಕನ್ನಡದ ಮೂಲಕ ಬರಬೇಕು. ಡಿಜಿಟಲ್ ವೇದಿಕೆಗಳಿಂದ ಮಾಹಿತಿ ಸಿಗಬಹುದು ಆದರೆ ಮನಸಿನ ಸಾಂತ್ವನಕ್ಕೆ ಪುಸ್ತಕದ ಓದು ಬೇಕು. ಪುಸ್ತಕಗಳಿಂದ ಬಹುರೂಪಿ ಜ್ಞಾನ, ಆಳವಾದ ಚಿಂತನೆ ಲಭಿಸುತ್ತದೆ’ ಎಂದು ಹೇಳಿದರು.</p>.<p>ನಿವೃತ್ತ ಪ್ರಾಧ್ಯಾಪಕ ಆರ್.ನರಸಿಂಹಮೂರ್ತಿ, ‘ಹೊಸ ಓದುಗರನ್ನು ಆಕರ್ಷಿಸುವ, ಓದಿನ ಆಸಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ’ ಎಂದರು.</p><p><br>ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಧನಂಜಯ ಕುಂಬ್ಳೆ, ‘ಪುಸ್ತಕ ಹೊಸ ವಿಷಯ ಪರಿಚಯಿಸುವ, ಹೊಸ ಲೋಕ ತೋರಿಸುವ ಆತ್ಮ ಸಂಗಾತಿ’ ಎಂದರು.</p><p><br>ನಗರದ ಸಪ್ನ ಬುಕ್ ಹೌಸ್ ಶಾಖಾ ವ್ಯವಸ್ಥಾಪಕ ಪ್ರೀತೇಶ್, ಹಂಪನಕಟ್ಟ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ, ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್, ಸುರತ್ಕಲ್ನ ಪ್ರೊ.ಕೃಷ್ಣಮೂರ್ತಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>