ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕಬ್ಬಿಣದ ಕಡಲೆಯಾದ ವೇದದ ಧರ್ಮಜ್ಞಾನವನ್ನು ದಾಸವರೇಣ್ಯರು ಸುಲಭ, ಸರಳರೂಪದಲ್ಲಿ, ವಚನಗಳ ಮೂಲಕ ಸಮಾಜಕ್ಕೆ ತಿಳಿಸಿದರು. ವಿಕೃತವನ್ನೂ ವೈಭವೀಕರಿಸುವುದು, ವಿಷವನ್ನು ಹಂಚುವುದು ಸಾಹಿತ್ಯವಲ್ಲ. ಸದ್ವಿಚಾರ ಹಂಚುವುದೇ ಸಾಹಿತ್ಯ. ಇಂಥ ಕೃತಿಗಳು ಸದ್ವಿಚಾರ ಪಸರಿಸುತ್ತದೆ ಎಂದರು.