ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಚಾಲಿಂಗಾಲ್ ಮೊಟ್ಟ ಎಂಬಲ್ಲಿನ ತಿರುವಿನಲ್ಲಿ ಮಗುಚಿದೆ. ಚಾಲಕ, ಪಾರೆಕಟ್ಟೆ ವಿವೇಕಾನಂದ ನಗರದ ನಿವಾಸಿ ಚೇತನ್ ಕುಮಾರ್ (36) ಮೃತಪಟ್ಟವರು. ಬಸ್ ನಿರ್ವಾಹಕ ಪಯ್ಯನ್ನೂರು ನಿವಾಸಿ ಶಶಿಧರನ್, ಪ್ರಯಾಣಿಕ, ಕೋಳವಯಲ್ ಇಟ್ಟಮ್ಮಲ್ ನಿವಾಸಿ ಅಬ್ದುಲ್ ರಹಮಾನ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.