<p><strong>ಮಂಗಳೂರು:</strong> ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯಡಿಯಲ್ಲಿ ದಿನದ 24 ಗಂಟೆ ಮಕ್ಕಳಿಗೆ ತುರ್ತು ಸೇವೆಯನ್ನು ನೀಡುತ್ತಿರುವ ‘ಚೈಲ್ಡ್ಲೈನ್-1098’ರ ಕಚೇರಿಗೆ ಜುಲೈ ತಿಂಗಳಲ್ಲಿ 113 ಕರೆಗಳು ಬಂದಿವೆ. ಇದುವರೆಗೆ ತಿಂಗಳಲ್ಲಿ ಬಂದ ಗರಿಷ್ಠ ಪ್ರಮಾಣದ ಕರೆಗಳಾಗಿವೆ ಎಂದು ಚೈಲ್ಡ್ಲೈನ್ ಮೂಲಗಳು ತಿಳಿಸಿವೆ.</p>.<p>‘ಸರಾಸರಿ ತಿಂಗಳಿಗೆ 80 ಕರೆಗಳು ಬರುತ್ತಿದ್ದವು. ಈ ಬಾರಿ 113 ಕರೆಗಳು ಬಂದಿದ್ದು, ಮಧ್ಯರಾತ್ರಿಯಲ್ಲೂ ಕೆಲ ಮಕ್ಕಳು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ’ ಎಂದು ಚೈಲ್ಡ್ಲೈನ್ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ ತಿಳಿಸಿದ್ದಾರೆ.</p>.<p>‘ನಿತ್ಯ ಸರಾಸರಿ 3–4 ರಿಂದ ನಾಲ್ಕು ಕರೆಗಳನ್ನು ಸ್ವೀಕರಿಸಲಾಗಿದೆ. ಈ ಬಾರಿ ಅತಿ ಹೆಚ್ಚು ಕರೆಗಳು ಬಂದಿದ್ದು, ಪಡಿತರ ಕಿಟ್ಗಾಗಿ. 43 ಮಕ್ಕಳು ಪಡಿತರ ಕಿಟ್ ಒದಗಿಸುವಂತೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ತಿಂಗಳಲ್ಲಿ ಒಂದೇ ದಿನ 30 ಮಕ್ಕಳು ಕರೆಮಾಡಿ, ಕಿಟ್ ನೀಡುವಂತೆ ಕೋರಿದ್ದರು’ ಎಂದು ಹೇಳಿದ್ದಾರೆ.</p>.<p>‘2019 ರ ಒಂದು ತಿಂಗಳಲ್ಲಿ ಚೈಲ್ಡ್ ಲೈನ್ 102 ಕರೆಗಳನ್ನು ಸ್ವೀಕರಿಸಿದ್ದು, ಇದುವರೆಗಿನ ಗರಿಷ್ಠ ಕರೆಗಳಾಗಿದ್ದವು. ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲ್ಲೂಕುಗಳು ಹಾಗೂ ಮಂಗಳೂರಿನ ಮಕ್ಕಳು ಚೈಲ್ಡ್ಲೈನ್ಗೆ ಕರೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಮೇಲಿನ ದೈಹಿಕ ಮತ್ತು ಮಾನಸಿಕ ಕಿರುಕುಳ ಪ್ರಕರಣಗಳು ಹೆಚ್ಚಿದ್ದು, ಈ ಬಗ್ಗೆ ಮಕ್ಕಳ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಆನ್ಲೈನ್ ತರಗತಿಗೆ ನೆಟ್ವರ್ಕ್ ಸಮಸ್ಯೆಯ ಬಗ್ಗೆಯೂ ಹಲವು ಮಕ್ಕಳು ದೂರು ಹೇಳಿಕೊಂಡಿದ್ದಾರೆ. ಆನ್ಲೈನ್ ಮೂಲಕ ಕಿರುಕುಳ, ಬ್ಲಾಕ್ಮೇಲ್, ಆನ್ಲೈನ್ ತರಗತಿಗಳಲ್ಲಿ ಅವಹೇಳನ ಇತ್ಯಾದಿ ದೂರುಗಳೂ ಕೇಳಿ ಬಂದಿವೆ.</p>.<p>‘ಮಕ್ಕಳು ಅನೇಕ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಯೂ ಆನ್ಲೈನ್ ಕಿರುಕುಳದಿಂದ ಮಕ್ಕಳು ಕುಗ್ಗುತ್ತಿದ್ದು, ಈ ಬಗ್ಗೆ ಪಾಲಕರಿಗೆ ತಿಳಿಸಲೂ ಹಿಂದೇಟು ಹಾಕುತ್ತಿದ್ದಾರೆ. ಕರೆ ಮಾಡಿದ ಅನೇಕ ಮಕ್ಕಳು ಈ ಬಗ್ಗೆ ಪಾಲಕರಿಗೆ ತಿಳಿಸದಂತೆ ಮನವಿ ಮಾಡಿದ್ದಾರೆ. ಇಂತಹ ಕಿರುಕುಳದಿಂದ ಬೇಸತ್ತ ಮಕ್ಕಳಿಗೆ ಚೈಲ್ಡ್ಲೈನ್ ಮೂಲಕ ಕೌನ್ಸೆಲಿಂಗ್ ಕೂಡ ಮಾಡಲಾಗಿದೆ’ ಎಂದು ದೀಕ್ಷಿತ್ ಅಚ್ರಪ್ಪಾಡಿ ತಿಳಿಸಿದ್ದಾರೆ.</p>.<p>ವೈದ್ಯಕೀಯ ನೆರವು, ಆಸರೆ, ಶಿಕ್ಷಣಕ್ಕೆ ಪ್ರಾಯೋಜಕತ್ವ, ದೈಹಿಕ, ಮಾನಸಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಭಿಕ್ಷೆ, ಕೌಟುಂಬಿಕೆ ಕಲಹ, ಬಾಲ್ಯವಿವಾಹ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡು ಬಂದಿದ್ದು, ಕೆಲವು ಮಕ್ಕಳು ಶಿಕ್ಷಣ ಕ್ಕಾಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ಎಲ್ಲ ಕರೆಗಳ ದಾಖಲೀಕರಣ ಮಾಡಲಾ ಗಿದ್ದು, ಸಂಬಂಧಿಸಿದವರ ಗಮನಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.</p>.<p>ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿ ಸುತ್ತಿರುವ ಮಕ್ಕಳಿಗೆ ನೆಟ್ವರ್ಕ್ ಸಮಸ್ಯೆ ಯಿದ್ದು, ಕೆಲವೊಮ್ಮೆ 1098ಕ್ಕೆ ಕರೆಗಳು ಹೋಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯಡಿಯಲ್ಲಿ ದಿನದ 24 ಗಂಟೆ ಮಕ್ಕಳಿಗೆ ತುರ್ತು ಸೇವೆಯನ್ನು ನೀಡುತ್ತಿರುವ ‘ಚೈಲ್ಡ್ಲೈನ್-1098’ರ ಕಚೇರಿಗೆ ಜುಲೈ ತಿಂಗಳಲ್ಲಿ 113 ಕರೆಗಳು ಬಂದಿವೆ. ಇದುವರೆಗೆ ತಿಂಗಳಲ್ಲಿ ಬಂದ ಗರಿಷ್ಠ ಪ್ರಮಾಣದ ಕರೆಗಳಾಗಿವೆ ಎಂದು ಚೈಲ್ಡ್ಲೈನ್ ಮೂಲಗಳು ತಿಳಿಸಿವೆ.</p>.<p>‘ಸರಾಸರಿ ತಿಂಗಳಿಗೆ 80 ಕರೆಗಳು ಬರುತ್ತಿದ್ದವು. ಈ ಬಾರಿ 113 ಕರೆಗಳು ಬಂದಿದ್ದು, ಮಧ್ಯರಾತ್ರಿಯಲ್ಲೂ ಕೆಲ ಮಕ್ಕಳು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ’ ಎಂದು ಚೈಲ್ಡ್ಲೈನ್ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ ತಿಳಿಸಿದ್ದಾರೆ.</p>.<p>‘ನಿತ್ಯ ಸರಾಸರಿ 3–4 ರಿಂದ ನಾಲ್ಕು ಕರೆಗಳನ್ನು ಸ್ವೀಕರಿಸಲಾಗಿದೆ. ಈ ಬಾರಿ ಅತಿ ಹೆಚ್ಚು ಕರೆಗಳು ಬಂದಿದ್ದು, ಪಡಿತರ ಕಿಟ್ಗಾಗಿ. 43 ಮಕ್ಕಳು ಪಡಿತರ ಕಿಟ್ ಒದಗಿಸುವಂತೆ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ತಿಂಗಳಲ್ಲಿ ಒಂದೇ ದಿನ 30 ಮಕ್ಕಳು ಕರೆಮಾಡಿ, ಕಿಟ್ ನೀಡುವಂತೆ ಕೋರಿದ್ದರು’ ಎಂದು ಹೇಳಿದ್ದಾರೆ.</p>.<p>‘2019 ರ ಒಂದು ತಿಂಗಳಲ್ಲಿ ಚೈಲ್ಡ್ ಲೈನ್ 102 ಕರೆಗಳನ್ನು ಸ್ವೀಕರಿಸಿದ್ದು, ಇದುವರೆಗಿನ ಗರಿಷ್ಠ ಕರೆಗಳಾಗಿದ್ದವು. ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲ್ಲೂಕುಗಳು ಹಾಗೂ ಮಂಗಳೂರಿನ ಮಕ್ಕಳು ಚೈಲ್ಡ್ಲೈನ್ಗೆ ಕರೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಮೇಲಿನ ದೈಹಿಕ ಮತ್ತು ಮಾನಸಿಕ ಕಿರುಕುಳ ಪ್ರಕರಣಗಳು ಹೆಚ್ಚಿದ್ದು, ಈ ಬಗ್ಗೆ ಮಕ್ಕಳ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಆನ್ಲೈನ್ ತರಗತಿಗೆ ನೆಟ್ವರ್ಕ್ ಸಮಸ್ಯೆಯ ಬಗ್ಗೆಯೂ ಹಲವು ಮಕ್ಕಳು ದೂರು ಹೇಳಿಕೊಂಡಿದ್ದಾರೆ. ಆನ್ಲೈನ್ ಮೂಲಕ ಕಿರುಕುಳ, ಬ್ಲಾಕ್ಮೇಲ್, ಆನ್ಲೈನ್ ತರಗತಿಗಳಲ್ಲಿ ಅವಹೇಳನ ಇತ್ಯಾದಿ ದೂರುಗಳೂ ಕೇಳಿ ಬಂದಿವೆ.</p>.<p>‘ಮಕ್ಕಳು ಅನೇಕ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಯೂ ಆನ್ಲೈನ್ ಕಿರುಕುಳದಿಂದ ಮಕ್ಕಳು ಕುಗ್ಗುತ್ತಿದ್ದು, ಈ ಬಗ್ಗೆ ಪಾಲಕರಿಗೆ ತಿಳಿಸಲೂ ಹಿಂದೇಟು ಹಾಕುತ್ತಿದ್ದಾರೆ. ಕರೆ ಮಾಡಿದ ಅನೇಕ ಮಕ್ಕಳು ಈ ಬಗ್ಗೆ ಪಾಲಕರಿಗೆ ತಿಳಿಸದಂತೆ ಮನವಿ ಮಾಡಿದ್ದಾರೆ. ಇಂತಹ ಕಿರುಕುಳದಿಂದ ಬೇಸತ್ತ ಮಕ್ಕಳಿಗೆ ಚೈಲ್ಡ್ಲೈನ್ ಮೂಲಕ ಕೌನ್ಸೆಲಿಂಗ್ ಕೂಡ ಮಾಡಲಾಗಿದೆ’ ಎಂದು ದೀಕ್ಷಿತ್ ಅಚ್ರಪ್ಪಾಡಿ ತಿಳಿಸಿದ್ದಾರೆ.</p>.<p>ವೈದ್ಯಕೀಯ ನೆರವು, ಆಸರೆ, ಶಿಕ್ಷಣಕ್ಕೆ ಪ್ರಾಯೋಜಕತ್ವ, ದೈಹಿಕ, ಮಾನಸಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಭಿಕ್ಷೆ, ಕೌಟುಂಬಿಕೆ ಕಲಹ, ಬಾಲ್ಯವಿವಾಹ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡು ಬಂದಿದ್ದು, ಕೆಲವು ಮಕ್ಕಳು ಶಿಕ್ಷಣ ಕ್ಕಾಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ಎಲ್ಲ ಕರೆಗಳ ದಾಖಲೀಕರಣ ಮಾಡಲಾ ಗಿದ್ದು, ಸಂಬಂಧಿಸಿದವರ ಗಮನಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.</p>.<p>ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿ ಸುತ್ತಿರುವ ಮಕ್ಕಳಿಗೆ ನೆಟ್ವರ್ಕ್ ಸಮಸ್ಯೆ ಯಿದ್ದು, ಕೆಲವೊಮ್ಮೆ 1098ಕ್ಕೆ ಕರೆಗಳು ಹೋಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>