ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ‘ಹೈನು’ ಹೊನಲಿಗೆ ಬೇಕಿದೆ ಹೊಸ ಚೇತನ

Published : 1 ಜನವರಿ 2024, 7:58 IST
Last Updated : 1 ಜನವರಿ 2024, 7:58 IST
ಫಾಲೋ ಮಾಡಿ
Comments
ಮಂಗಳೂರಿನ ಡೊಂಗರಕೇರಿ ಪೇಟೆಯ ನಡುವೆ ಸೊಂಪಾಗಿ ಬೆಳೆದಿರುವ ಹಸುಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಡೊಂಗರಕೇರಿ ಪೇಟೆಯ ನಡುವೆ ಸೊಂಪಾಗಿ ಬೆಳೆದಿರುವ ಹಸುಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
‘ಸಮತೋಲನ ಆಹಾರ ಬಹುಮುಖ್ಯ’
ಹಸುಗಳಲ್ಲಿ ಗ‌ರ್ಭ ಕಟ್ಟುವುದು ಸಮಸ್ಯೆಯಾಗುತ್ತಿದೆ. ಹಸುಗಳಲ್ಲಿ ಸಂತಾನೋತ್ಪತ್ತಿ ಕಡಿಮೆಯಾದಾಗ ಹೈನುಗಾರಿಕೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ ಎಂಬುದು ಅನೇಕ ಹೈನುಗಾರರ ಅಳಲು. ‘ಜಾನುವಾರುಗಳಿಗೆ ಸಮತೋಲನ ಆಹಾರ ನೀಡುವುದು ಅತ್ಯಂತ ಮಹತ್ವದ್ದು. ಪಶು ಆಹಾರವೊಂದನ್ನೇ ಮುಖ್ಯ ಆಹಾರವಾಗಿ ನೀಡಿದರೆ ಬೊಜ್ಜು ಬೆಳೆಯುವ ಸಾಧ್ಯತೆ ಇರುತ್ತದೆ. ಸಮತೋಲಿತ ಪಶು ಆಹಾರ ಜತೆಗೆ ಒಣಹುಲ್ಲು ಹಸಿರು ಹುಲ್ಲು ನೀಡಬೇಕು. ಕರಾವಳಿಯಲ್ಲಿ ಅತ್ಯಧಿಕ ಮಳೆಯಾಗುವ ಕಾರಣ ಇಲ್ಲಿನ ಮಣ್ಣಿನಲ್ಲಿ ಪೌಷ್ಟಿಕಾಂಶ ಕಡಿಮೆ. ಹೀಗಾಗಿ ಹುಲ್ಲಿನಲ್ಲಿಯೂ ಖನಿಜಾಂಶ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಹಸುಗಳಿಗೆ ಲವಣ ಮಿಶ್ರಣವನ್ನು ಕಾಲಕಾಲಕ್ಕೆ ನೀಡಬೇಕು’ ಎಂಬುದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕ ಡಾ. ಅರುಣ್‌ಕುಮಾರ್ ಶೆಟ್ಟಿ ಅವರ ಸಲಹೆ. ‘ಸತತ ಮೂರು ಪ್ರಯತ್ನಗಳ ನಂತರವೂ ಹಸು ಗರ್ಭ ಕಟ್ಟದಿದ್ದರೆ ನುರಿತ ಪಶುವೈದ್ಯರನ್ನು ಸಂಪರ್ಕಿಸಿ ಆ ಹಸುವಿಗೆ ಚಿಕಿತ್ಸೆ ಕೊಡಿಸಬೇಕು. ಒಂದು ದನ ವರ್ಷಕ್ಕೊಂದು ಕರು ಹಾಕಿ ಹಾಲು ನೀಡಿದಾಗ ಮಾತ್ರ ಹಸು ಸಾಕಾಣಿಕೆಯಲ್ಲಿ ಲಾಭಗಳಿಸಲು ಸಾಧ್ಯ’ ಎನ್ನುತ್ತಾರೆ ಅವರು.
‘ಯುವಜನರನ್ನು ಆಕರ್ಷಿಸುವ ಯೋಜನೆ’
ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗಳಲ್ಲಿ ಹಾಲಿನ ಬೇಡಿಕೆ ಶೇ 25ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ ಹಾಲಿನ ಉತ್ಪಾದನೆಯೂ ತಗ್ಗಿದೆ. ಪ್ರಸ್ತುತ ಕೊರತೆಯಾಗುವ ಹಾಲನ್ನು ಮಂಡ್ಯ ಹಾಸನ ಭಾಗದಿಂದ ತರಿಸಿಕೊಳ್ಳಲಾಗುತ್ತಿದೆ. ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಸಹಕಾರದಿಂದ ಹೆಚ್ಚುವರಿ ಸಾಗಣೆ ವೆಚ್ಚ ಇಲ್ಲದೆ ಹಾಲನ್ನು ಬೇರೆ ಒಕ್ಕೂಟಗಳಿಂದ ತರಿಸಿಕೊಂಡು ಹಾಲಿನ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸರಿದೂಗಿಸಲಾಗುತ್ತಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ್ ಶೆಟ್ಟಿ. ದನಗಳಿಗೆ ಕಾಡುವ ಚರ್ಮಗಂಟು ರೋಗ ವೈರಲ್ ಜ್ವರ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದ್ದು ಇದು ತಾತ್ಕಾಲಿಕ ತೊಂದರೆ. ಆದರೆ ಸವಾಲು ಇರುವುದು ಹೈನುಗಾರಿಕೆ ವಿಸ್ತರಣೆಯಲ್ಲಿ. ಕೃಷಿ ನಂಟಿನ ನೆಲದಲ್ಲಿ ನಳನಳಿಸಬೇಕಾಗಿದ್ದ ಹೈನುಗಾರಿಕೆ ಪೇಟೆ ವಿಸ್ತರಣೆಯಾದ ಪ್ರದೇಶಗಳಲ್ಲೆಲ್ಲ ಸೊರಗುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಹಾಲು ಸಂಘಗಳಿಗೆ ಹಾಲು ಹಾಕುವವರನ್ನು ಗಮನಿಸಿದರೆ 50 ವರ್ಷ ಮೀರಿದವರೇ ಹೆಚ್ಚು. ಯುವಜನರು ಹೈನೋದ್ಯಮದತ್ತ ಮುಖ ಮಾಡದಿದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಹದಗೆಡುವ ಆತಂಕವಿದೆ. ಈ ವಿಷಯವನ್ನು ಗಂಭೀರವಾಗಿ ಯೋಚಿಸಿರುವ ಒಕ್ಕೂಟವು ದನ ಸಾಕಣೆಗೆ ಪ್ರೋತ್ಸಾಹಧನ ಹಸಿರು ಹುಲ್ಲು ಪ್ರದೇಶ ವಿಸ್ತರಣೆ ಯುವಜನರನ್ನು ಆಕರ್ಷಿಸುವ ಇನ್ನಷ್ಟು ಯೋಜನೆಗಳನ್ನು ರೂಪಿಸಲು ಮುಂದಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT