ಹಸಿಕಸಕ್ಕೆ ಕೊಕೊಪಿಟ್ ಹಾಕಿ ಒಣಗಿಸಿ, ಕೆಲದಿನಗಳ ಬಳಿಕ ತಯಾರಾದ ಗೊಬ್ಬರವನ್ನು ಪ್ಯಾಕಿಂಗ್ ಮಾಡಲಾಗುತ್ತದೆ. ನೇರವಾಗಿ ಕೃಷಿಕರು, ಮನೆಯಲ್ಲಿ ತರಕಾರಿ ಗಿಡ ಬೆಳೆಸುವವರಿಗೆ ಪೂರೈಸಲಾಗುತ್ತದೆ. ಶಾಸಕ ಯು.ಟಿ. ಖಾದರ್ ಮುತುವರ್ಜಿಯಿಂದ ಬಿಡುಗಡೆಗೊಂಡ ‘ಉಳ್ಳಾಲ ಬ್ರ್ಯಾಂಡ್’ ಗೊಬ್ಬರಕ್ಕೆ ಕೆ.ಜಿ.ಯೊಂದಕ್ಕೆ ₹ 10 ದರ ಪಡೆಯಲಾಗುತ್ತಿದೆ. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ 11 ಟನ್ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ 7 ಟನ್ ಮಂಗಳೂರಿಗೆ ಹೋದರೆ, ಉಳಿದ 4 ಟನ್ನಲ್ಲಿ ನಗರಸಭೆ ಬಳಿ ಮತ್ತು ಕಲ್ಲಾಪು ಭಾಗದಲ್ಲಿ ಗೊಬ್ಬರ ಮಾಡಲಾಗುತ್ತದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.