<p><strong>ಮೂಡುಬಿದಿರೆ:</strong> ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ತೋಡಾರು ಪರಿಸರದ ಅಯ್ಯಪ್ಪ ವ್ರತಧಾರಿಗಳ ಜತೆಗೆ ಶ್ವಾನವೊಂದು ಸುಮಾರು 400 ಕಿ.ಮೀ. ಹಿಂಬಾಲಿಸಿ ಬಂದು ಮಂಗಳವಾರ ಮೂಡುಬಿದಿರೆ ತಲುಪಿದ್ದು ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.</p>.<p>ಅಯ್ಯಪ್ಪ ವ್ರತಧಾರಿಗಳು ರಾಜೇಶ್ ಗುರುಸ್ವಾಮಿ ನೇತೃತ್ವದಲ್ಲಿ ಅಕ್ಟೋಬರ್ 30ರಂದು ತಿರುಪತಿ ತಿರುಮಲದಿಂದ ಪಾದಯಾತ್ರೆ ಹೊರಟಿದ್ದರು. ಚಿಕ್ಕಮಗಳೂರು ಮಾರ್ಗವಾಗಿ ಹುಟ್ಟೂರು ಮೂಡುಬಿದಿರೆಗೆ ಹೊರಟ ಈ ತಂಡದ ಜತೆ ತಿರುಪತಿಯಿಂದ ಶ್ವಾನವೊಂದು ಹಿಂಬಾಲಿಸಿಕೊಂಡು ಬಂದಿದೆ. ಮಂಗಳವಾರ ವ್ರತಧಾರಿಗಳು ಮೂಡುಬಿದಿರೆಯ ಮಣಿಕಂಠ ಕ್ಷೇತ್ರಕ್ಕೆ ಆಗಮಿಸಿದಾಗ ಕ್ಷೇತ್ರದ ಪ್ರಮುಖರಾದ ರಮೇಶ್ ಶಾಂತಿ ಮತ್ತು ಕ್ಷೇತ್ರದ ಪ್ರಮುಖ ಸುದರ್ಶನ್ ಎಂ ಬರಮಾಡಿಕೊಂಡರು. ಅಲ್ಲಿಂದ ತೋಡಾರಿಗೆ ಹೊರಟಿದ್ದು ಶ್ವಾನ ಅವರ ಜತೆ ಹೆಜ್ಜೆ ಹಾಕಿದೆ.</p>.<p>ವ್ರತಧಾರಿ ರಾಜೇಶ್ ಮಾತನಾಡಿ ‘ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಕುರಿತ ಸಂಕಲ್ಪದಿಂದ ವ್ರತಧಾರಿಗಳು ಅಯೋಧ್ಯೆ ಹಾಗೂ ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ:</strong> ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿರುವ ತೋಡಾರು ಪರಿಸರದ ಅಯ್ಯಪ್ಪ ವ್ರತಧಾರಿಗಳ ಜತೆಗೆ ಶ್ವಾನವೊಂದು ಸುಮಾರು 400 ಕಿ.ಮೀ. ಹಿಂಬಾಲಿಸಿ ಬಂದು ಮಂಗಳವಾರ ಮೂಡುಬಿದಿರೆ ತಲುಪಿದ್ದು ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.</p>.<p>ಅಯ್ಯಪ್ಪ ವ್ರತಧಾರಿಗಳು ರಾಜೇಶ್ ಗುರುಸ್ವಾಮಿ ನೇತೃತ್ವದಲ್ಲಿ ಅಕ್ಟೋಬರ್ 30ರಂದು ತಿರುಪತಿ ತಿರುಮಲದಿಂದ ಪಾದಯಾತ್ರೆ ಹೊರಟಿದ್ದರು. ಚಿಕ್ಕಮಗಳೂರು ಮಾರ್ಗವಾಗಿ ಹುಟ್ಟೂರು ಮೂಡುಬಿದಿರೆಗೆ ಹೊರಟ ಈ ತಂಡದ ಜತೆ ತಿರುಪತಿಯಿಂದ ಶ್ವಾನವೊಂದು ಹಿಂಬಾಲಿಸಿಕೊಂಡು ಬಂದಿದೆ. ಮಂಗಳವಾರ ವ್ರತಧಾರಿಗಳು ಮೂಡುಬಿದಿರೆಯ ಮಣಿಕಂಠ ಕ್ಷೇತ್ರಕ್ಕೆ ಆಗಮಿಸಿದಾಗ ಕ್ಷೇತ್ರದ ಪ್ರಮುಖರಾದ ರಮೇಶ್ ಶಾಂತಿ ಮತ್ತು ಕ್ಷೇತ್ರದ ಪ್ರಮುಖ ಸುದರ್ಶನ್ ಎಂ ಬರಮಾಡಿಕೊಂಡರು. ಅಲ್ಲಿಂದ ತೋಡಾರಿಗೆ ಹೊರಟಿದ್ದು ಶ್ವಾನ ಅವರ ಜತೆ ಹೆಜ್ಜೆ ಹಾಕಿದೆ.</p>.<p>ವ್ರತಧಾರಿ ರಾಜೇಶ್ ಮಾತನಾಡಿ ‘ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಕುರಿತ ಸಂಕಲ್ಪದಿಂದ ವ್ರತಧಾರಿಗಳು ಅಯೋಧ್ಯೆ ಹಾಗೂ ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>