ಅಯ್ಯಪ್ಪ ವ್ರತಧಾರಿಗಳು ರಾಜೇಶ್ ಗುರುಸ್ವಾಮಿ ನೇತೃತ್ವದಲ್ಲಿ ಅಕ್ಟೋಬರ್ 30ರಂದು ತಿರುಪತಿ ತಿರುಮಲದಿಂದ ಪಾದಯಾತ್ರೆ ಹೊರಟಿದ್ದರು. ಚಿಕ್ಕಮಗಳೂರು ಮಾರ್ಗವಾಗಿ ಹುಟ್ಟೂರು ಮೂಡುಬಿದಿರೆಗೆ ಹೊರಟ ಈ ತಂಡದ ಜತೆ ತಿರುಪತಿಯಿಂದ ಶ್ವಾನವೊಂದು ಹಿಂಬಾಲಿಸಿಕೊಂಡು ಬಂದಿದೆ. ಮಂಗಳವಾರ ವ್ರತಧಾರಿಗಳು ಮೂಡುಬಿದಿರೆಯ ಮಣಿಕಂಠ ಕ್ಷೇತ್ರಕ್ಕೆ ಆಗಮಿಸಿದಾಗ ಕ್ಷೇತ್ರದ ಪ್ರಮುಖರಾದ ರಮೇಶ್ ಶಾಂತಿ ಮತ್ತು ಕ್ಷೇತ್ರದ ಪ್ರಮುಖ ಸುದರ್ಶನ್ ಎಂ ಬರಮಾಡಿಕೊಂಡರು. ಅಲ್ಲಿಂದ ತೋಡಾರಿಗೆ ಹೊರಟಿದ್ದು ಶ್ವಾನ ಅವರ ಜತೆ ಹೆಜ್ಜೆ ಹಾಕಿದೆ.