ಮಂಗಳೂರು: ‘ಈದ್ ಮಿಲಾದ್ ಪ್ರಯುಕ್ತ ಬಂದರಿನ ಮೀನುಗಾರಿಕಾ ದಕ್ಕೆಯ ಮೀನು ವ್ಯಾಪಾರಿಗಳು ಇದೇ 28ರಂದು ಮುಂಜಾನೆ ಬೆಳಿಗ್ಗೆ 3.45ರ ನಂತರ ಕಡ್ಡಾಯವಾಗಿ ರಜೆ ಮಾಡಬೇಕು. ಇಲ್ಲದಿದ್ದರೆ ಧಕ್ಕೆಯಲ್ಲಿ ಒಂದು ತಿಂಗಳು ಒಂದು ವ್ಯಾಪಾರ ಮಾಡದಂತೆ ಕ್ರಮಕೈಗೊಳ್ಳುತ್ತೇವೆ’ ಎಂದು ಬಂದರಿನ ದಕ್ಷಿಣ ದಕ್ಕೆಯ ಹಸಿ ಮೀನು ವ್ಯಾಪಾರಸ್ಥರ ಸಂಘವು ಬ್ಯಾನರ್ ಅಳವಡಿಸಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್, ‘ಈ ಬ್ಯಾನರ್ ಹಾಕಿದವರ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿದೆ.