10 ಅಂಗವಿಕಲ ಮಕ್ಕಳಿಗೆ ಆರ್ಥಿಕ ನೆರವು ನೀಡಿರುವ ಅವರು, ಸಾಧನೆಗೈದ ವಿದ್ಯಾರ್ಥಿಗಳ ಮನೆಗೇ ಹೋಗಿ ನೆರವಾಗುತ್ತಾರೆ. 15ಕ್ಕಿಂತ ಹೆಚ್ಚು ಮಕ್ಕಳಿಗೆ ಶಾಲಾ ಶುಲ್ಕ, ನೋಟ್ಬುಕ್ ನೀಡಿದ್ದಾರೆ. ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಕೊಯ್ಯೂರು, ಮಲೆಬೆಟ್ಟು ಸುತ್ತಮುತ್ತ 100 ಬಡ ಕುಟುಂಬಗಳಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ಕಿಟ್ ವಿತರಿಸುವ ಮೂಲಕ ಅವರು ಸೇವೆ ಸಲ್ಲಿಸಿದ್ದರು. ಪೊಲೀಸ್ ಠಾಣೆಯ ಸಭಾಭವನದ ಚಾವಣಿ ನಿರ್ಮಾಣಕ್ಕೆ ₹ 25ಸಾವಿರ ದೇಣಿಗೆ ನೀಡಿದ್ದಾರೆ.