ಮೂಡಿಗೆರೆಯ ನಾಗೇಶ (57) ಎನ್ನುವವರು ತೀವ್ರ ಎದೆನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತಪಾಸಣೆ ನಡೆಸಿದ ಡಾ. ಪ್ರದೀಪ್ ಪಿರೇರಾ ಅವರು, ಈ ವ್ಯಕ್ತಿಯಲ್ಲಿ ಎದೆಯ ಬಲಭಾಗದಲ್ಲಿ ಹೃದಯ ಮತ್ತು ಹೊಟ್ಟೆಯ ಎಡಭಾಗದಲ್ಲಿ ಯಕೃತ್ತು ಇರುವುದನ್ನು ಗಮನಿಸಿದರು. ಇದು ಹುಟ್ಟುವಾಗಲೇ ಇರುವ ಸಮಸ್ಯೆಯಾಗಿದ್ದು, 10ಸಾವಿರ ಜನರಲ್ಲಿ ಒಬ್ಬರಲ್ಲಿ ಇಂತಹ ಪ್ರಕರಣ ಇರುತ್ತದೆ. ನಾಗೇಶ್ ಅವರಿಗೆ ಅಪಧಮನಿಯ ತೊಂದರೆ ಮೊದಲಿನಿಂದ ಇತ್ತು. ಎಂಜಿಯೊಗ್ರಾಮ್ ಮಾಡಿದಾಗ ಹೃದಯದ ರಕ್ತನಾಳದಲ್ಲಿ ತೀವ್ರವಾದ ಬ್ಲಾಕ್ ಇರುವುದನ್ನು ವೈದ್ಯರು ಗುರುತಿಸಿದರು. ಎಂಜಿಯೊಪ್ಲಾಸ್ಟಿ ಮೂಲಕ ರೋಗಿಗೆ ಚಿಕಿತ್ಸೆ ನೀಡಲಾಯಿತು. ಡಾ. ಪ್ರದೀಪ್ ಅವರಿಗೆ ಕ್ಯಾಥಲ್ಯಾಬ್ ತಂತ್ರಜ್ಞ ಪುರುಷೋತ್ತಮ್, ನರ್ಸ್ಗಳಾದ ರೀಟಾ, ನಿಧಿನ್, ರಾಮ್, ಸ್ಟೀವನ್, ಜೆಸ್ಟಿನಾ ಸಹಕರಿಸಿದರು.