<p><strong>ಮಂಗಳೂರು: </strong>ಲಾಕ್ಡೌನ್ ಬಳಿಕ ಕೊಲ್ಲಿ ರಾಷ್ಟ್ರಗಳಿಂದ ಅನಿವಾಸಿ ಭಾರತೀಯರನ್ನು ಮಂಗಳೂರಿಗೆ ಕರೆತಂದ ಮೂರನೇ ವಿಮಾನವು ಬುಧವಾರ ಮಸ್ಕತ್ನಿಂದ ಹೊರಟು ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.05ಕ್ಕೆ ಬಂದಿಳಿಯಿತು.</p>.<p>‘ಒಟ್ಟು 63 ಪ್ರಯಾಣಿಕರಿದ್ದರು. ಪ್ರಯಾಣಿಕರ ಬೇಡಿಕೆಯಂತೆ ಅವರವರ ಜಿಲ್ಲೆಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಯಿತು’ ಎಂದುನೋಡಲ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.</p>.<p>ಒಟ್ಟು ಪ್ರಯಾಣಿಕರ ಪೈಕಿ ಉತ್ತರ ಕನ್ನಡದ 3, ಉಡುಪಿಯ 20 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 40 ಮಂದಿ ಪ್ರಯಾಣಿಕರು ಇದ್ದರು. ಇದರಲ್ಲಿ ಏಳು ಮಂದಿ ಗರ್ಭಿಣಿಯರು ಎಂದು ತಿಳಿದುಬಂದಿದೆ.</p>.<p>ಪ್ರಯಾಣಿಕರಿಗೆ ಆರೋಗ್ಯ ಪರೀಕ್ಷೆ, ಕ್ವಾರಂಟೈನ್ ಹೋಟೆಲ್ ನಿಗದಿ, ಊಟೋಪಚಾರ, ಇಮಿಗ್ರೇಷನ್ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ.</p>.<p>ದುಬೈನಿಂದ ಬಂದಿದ್ದ ಮೊದಲ ವಿಮಾನದಲ್ಲಿ ಜಿಲ್ಲೆಯಲ್ಲಿ ಉಳಿದ 125 ಮಂದಿ ಪೈಕಿ 9 ಹಾಗೂ ಎರಡನೇ ವಿಮಾನದ 110 ಮಂದಿ ಪೈಕಿ 24 ಜನರಿಗೆ ಸರ್ಕಾರದ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೌದಿಯಿಂದ ಬೆಂಗಳೂರಿಗೆ ಬಂದಿಳಿದ ವಿಮಾನದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಪ್ರಯಾಣಿಕರು ಇದ್ದರು ಎಂದು ಎನ್ಆರ್ಐ ಟಾಸ್ಕ್ಫೋರ್ಸ್ ಘಟಕ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಲಾಕ್ಡೌನ್ ಬಳಿಕ ಕೊಲ್ಲಿ ರಾಷ್ಟ್ರಗಳಿಂದ ಅನಿವಾಸಿ ಭಾರತೀಯರನ್ನು ಮಂಗಳೂರಿಗೆ ಕರೆತಂದ ಮೂರನೇ ವಿಮಾನವು ಬುಧವಾರ ಮಸ್ಕತ್ನಿಂದ ಹೊರಟು ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.05ಕ್ಕೆ ಬಂದಿಳಿಯಿತು.</p>.<p>‘ಒಟ್ಟು 63 ಪ್ರಯಾಣಿಕರಿದ್ದರು. ಪ್ರಯಾಣಿಕರ ಬೇಡಿಕೆಯಂತೆ ಅವರವರ ಜಿಲ್ಲೆಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಯಿತು’ ಎಂದುನೋಡಲ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.</p>.<p>ಒಟ್ಟು ಪ್ರಯಾಣಿಕರ ಪೈಕಿ ಉತ್ತರ ಕನ್ನಡದ 3, ಉಡುಪಿಯ 20 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 40 ಮಂದಿ ಪ್ರಯಾಣಿಕರು ಇದ್ದರು. ಇದರಲ್ಲಿ ಏಳು ಮಂದಿ ಗರ್ಭಿಣಿಯರು ಎಂದು ತಿಳಿದುಬಂದಿದೆ.</p>.<p>ಪ್ರಯಾಣಿಕರಿಗೆ ಆರೋಗ್ಯ ಪರೀಕ್ಷೆ, ಕ್ವಾರಂಟೈನ್ ಹೋಟೆಲ್ ನಿಗದಿ, ಊಟೋಪಚಾರ, ಇಮಿಗ್ರೇಷನ್ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ.</p>.<p>ದುಬೈನಿಂದ ಬಂದಿದ್ದ ಮೊದಲ ವಿಮಾನದಲ್ಲಿ ಜಿಲ್ಲೆಯಲ್ಲಿ ಉಳಿದ 125 ಮಂದಿ ಪೈಕಿ 9 ಹಾಗೂ ಎರಡನೇ ವಿಮಾನದ 110 ಮಂದಿ ಪೈಕಿ 24 ಜನರಿಗೆ ಸರ್ಕಾರದ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೌದಿಯಿಂದ ಬೆಂಗಳೂರಿಗೆ ಬಂದಿಳಿದ ವಿಮಾನದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಪ್ರಯಾಣಿಕರು ಇದ್ದರು ಎಂದು ಎನ್ಆರ್ಐ ಟಾಸ್ಕ್ಫೋರ್ಸ್ ಘಟಕ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>