‘ಅರಣ್ಯ ಇಲಾಖೆಯು ಸಸಿಹಿತ್ಲು, ಇಡ್ಯಾ, ಬೆಂಗರೆ, ತಣ್ಣೀರುಬಾವಿ ಹಾಗೂ ಸೋಮೇಶ್ವರದಲ್ಲಿ ಕಡಲಾಮೆಗಳ ಪತ್ತೆ ಹಾಗೂ ಅವುಗಳ ಚಟುವಟಿಕೆ ದಾಖಲೀಕರಣಕ್ಕೆ ಕಿನಾರೆಗಳಲ್ಲಿ ಶಿಬಿರಗಳನ್ನು ಆರಂಭಿಸಿದೆ. ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ರಕ್ಷಕರ ಮಾರ್ಗದರ್ಶನದಲ್ಲಿ ಮೂರು ಅಥವಾ ನಾಲ್ವರು ವೀಕ್ಷಕರು ಕಡಲಾಮೆಗಳು ಕಿನಾರೆಗೆ ಬಂದು ಗೂಡು ಕಟ್ಟಿ ಸಂತಾನೋತ್ಪಾದನೆ ಮಾಡುವ ಪ್ರಕ್ರಿಯೆಯನ್ನು ಮುಸ್ಸಂಜೆಯಿಂದ ಮುಂಜಾನೆವರೆಗೆ ಪರಿವೀಕ್ಷಿಸಿ ದಾಖಲೀಕರಿಸುತ್ತಿದ್ದಾರೆ’.