ಇದನ್ನು ಗಮನಿಸಿದ ಉಜಿರೆಯ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ಕಮಾರ್, ಉದ್ಯಮಿ ರಾಜೇಶ್ ಪೈ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ತಾಲ್ಲೂಕು ಪತ್ರಕರ್ತರ ಸಂಘ, ಉಜಿರೆ ಗ್ರಾಮ ಪಂಚಾಯಿತಿ, ಬೆಂಗಳೂರಿನ ಕ್ಯಾನ್ಫಿನ್ ಹೋಮ್, ಇಂದಿರಾನಗರ ರೋಟರಿ ಕ್ಲಬ್, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಸ್ಡಿಎಂ ಕಾಲೇಜಿನ ಕ್ರೀಡಾಸಂಘ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಪರಿಶ್ರಮ, ಶ್ರಮದಾನದಿಂದ ಈ ಶಾಲೆ ನವೀಕರಣಗೊಂಡಿದೆ. 60 ದಿನಗಳಲ್ಲಿ, ಸುಮಾರು ₹ 30 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡಿರುವ ಜ್ಞಾನ ದೇಗುಲ ಮೇ 23ರಂದು ನಡೆಯಲಿರುವ ಯಶೋನಮನ ಕಾರ್ಯಕ್ರಮದಡಿ ಹಸ್ತಾಂತರಗೊಳ್ಳಲಿದೆ.